ಬೆಂಗಳೂರು: ಕೊರೋನಾ ಸೋಂಕು ವೃದ್ಧರನ್ನು ಹೆಚ್ಚಾಗಿ ಬಲಿ ಪಡೆಯುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ 93 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಗುಣಮುಖರಾಗಿದ್ದು, ಆ ಮೂಲಕ ಕೊರೋನಾ ಗೆದ್ದ ರಾಜ್ಯದ ಮೂರನೇಯ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ನಗರದ ಖಾಸಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿರುವ 93 ವರ್ಷದ ಅಜ್ಜ ಕೊರೋನಾ ಗೆದ್ದಿದ್ದಾರೆ. ಕೆಲವು ದಿನಗಳ ಹಿಂದೆ ಉಸಿರಾಟದ ತೊಂದರೆ ಮತ್ತು ಜ್ವರದ ಕಾರಣಕ್ಕೆ ಈ ಅಜ್ಜನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇವರಿಗೆ ನಡೆಸಿದ ಕೊರೋನಾ ಟೆಸ್ಟ್ ವರದಿ ಪಾಸಿಟಿವ್ ಬಂದಿತ್ತು. ಪರಿಣಾಮಕಾರಿ ಚಿಕಿತ್ಸೆಯ ಬಳಿಕ ಗುಣಮುಖರಾಗಿರುವ ಇವರು ಸದ್ಯ ಮನೆಗೆ ಹಿಂದಿರುಗಿದ್ದಾರೆ.
ಇವರಿಗೆ ಸತತ 19 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದ್ದು, ಆ ಬಳಿಕ ಅವರು ಚೇತರಿಸಿಕೊಂಡು ಕೊರೋನಾ ಮುಕ್ತರಾಗಿದ್ದಾರೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೂ, ಸಕಾಲಕ್ಕೆ ಪರಿಣಾಮಕಾರಿ ಚಿಕಿತ್ಸೆ ಲಭಿಸಿರುವ ಕಾರಣದಿಂದಾಗಿ ಇವರು ಕೊರೋನಾ ಗೆದ್ದಿದ್ದಾರೆ. ಇನ್ನು ಇವರಿಗೂ ಮುನ್ನ ಬೆಂಗಳೂರಿನ 99 ವರ್ಷದ ಮಹಿಳೆ ಹಾಗೂ 96 ವರ್ಷದ ಚಿತ್ರದುರ್ಗದ ವೃದ್ಧೆಯೊಬ್ಬರು ಕೊರೋನಾ ಗೆಲ್ಲುವ ಮೂಲಕ ಸುದ್ದಿಯಾಗಿದ್ದರು. ಇದೀಗ 93 ವರ್ಷದ ವೃದ್ಧರಿಗೂ ಕೊರೋನಾ ಚಿಕಿತ್ಸೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಆ ಮೂಲಕ ವೈದ್ಯಕೀಯ ವಲಯದಲ್ಲಿ ಹೊಸ ಭರವಸೆ ಸೃಷ್ಟಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.