ಕಾಸರಗೋಡು: ದಕ್ಷಿಣ ಭಾರತದ ತಾಂತ್ರಿಕ ಪರಂಪರೆಯ ಪ್ರಮುಖರಲ್ಲೊಬ್ಬರಾದ ಬ್ರಹ್ಮಶ್ರೀ ವೇದಮೂರ್ತಿ ಬಾಲಕೃಷ್ಣ ತಂತ್ರಿಗಳು ಮಂಗಳವಾರ ಮಧ್ಯರಾತ್ರಿ 12:20ಕ್ಕೆ ನಿಧನರಾದರು. ತಾಂತ್ರಿಕ ಪರಂಪರೆ ಹಾಗೂ ವೈದಿಕ ಶಾಸ್ತ್ರಗಳಲ್ಲಿ ಅಪಾರಜ್ಞಾನ ಹಾಗೂ ಅಗಾಧ ಪಾಂಡಿತ್ಯ ಹೊಂದಿದ್ದ ಬಾಲಕೃಷ್ಣ ತಂತ್ರಿಗಳು ಕಾಸರಗೋಡು, ಮಂಗಳೂರು, ಸುಳ್ಯ ಪ್ರದೇಶದ ಅನೇಕ ದೇವಸ್ಥಾನಗಳು ಹಾಗೂ ದೈವಸ್ಥಾನಗಳಿಗೆ ಪ್ರತಿಷ್ಠೆ ಕಾರ್ಯಗಳನ್ನು ನೆರವೇರಿಸಿದವರು.
ಮಾರ್ಚ್ 9, 1943ರಲ್ಲಿ ಜನಿಸಿದ ಬಾಲಕೃಷ್ಣ ತಂತ್ರಿಗಳು ಕಾಸರಗೋಡು ಮಂಗಳೂರು ಪ್ರದೇಶದ ಅನೇಕ ದೇಗುಲಗಳ ವೈದಿಕ-ಧಾರ್ಮಿಕ ಕಾರ್ಯಕ್ರಮಗಳಿಗೆ ಅನೇಕ ದಶಕಗಳಿಂದ ನೇತೃತ್ವ ನೀಡಿದ್ದರು.
1960ರ ಸಂದರ್ಭದಲ್ಲಿ ಕಾಸರಗೋಡಿನ ಅಗಲ್ಪಾಡಿ, ಕುಂಬಡಾಜೆ ಪ್ರದೇಶದಲ್ಲಿ ಮೊಟ್ಟ ಮೊದಲ ಬಾರಿಗೆ RSS ಶಾಖೆಗಳನ್ನು ಪ್ರಾರಂಭಿಸಿದವರು ಬಾಲಕೃಷ್ಣ ತಂತ್ರಿಗಳು. RSS, VHP, ಸಾಮರಸ್ಯ ವೇದಿಕೆ ಇತ್ಯಾದಿ ಸಂಘಟನೆಗಳಿಗೆ ಸಲಹೆ ಮಾರ್ಗದರ್ಶನ ನೀಡುತ್ತಿದ್ದರು. ದೇವಸ್ಥಾನ, ಧಾರ್ಮಿಕ ಸುಧಾರಣಾ ಕಾರ್ಯಕ್ರಮಗಳು ಇತ್ಯಾದಿ ವಿಷಯಗಳಲ್ಲಿ ಸದಾ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು.
ಇತ್ತೀಚಿಗೆ ಕೊರೋನಾ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಮುಖೇನ ರೋಗ ನಿರೋಧಕ ಶಕ್ತಿಯ ವರ್ಧನೆಗಾಗಿ ಆಯುರ್ವೇದಿಕ್ ಮತ್ತು ಪಾರಂಪರಿಕ ಔಷಧಿಯ ವಿಧಾನಗಳ ಬಗ್ಗೆ ಸಲಹೆ ನೀಡಿದ್ದರು.
ಬಾಲಕೃಷ್ಣ ತಂತ್ರಿಗಳ ನಿಧನಕ್ಕೆ ಕುಟುಂಬ ಪ್ರಬೋಧನ್ ಅಖಿಲ ಭಾರತೀಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಆರೆಸ್ಸೆಸ್ ವಿಭಾಗ ಸಂಘಚಾಲಕ ಗೋಪಾಲ್ ಚೆಟ್ಟಿಯಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.