ಬೆಂಗಳೂರು: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಭಾರತೀಯ ರೈಲ್ವೆ ಇಲಾಖೆಯ ಬೆಂಗಳೂರು ಘಟಕ ಹೊಸ ಆದಾಯದ ಮೂಲವೊಂದನ್ನು ಕಂಡುಕೊಂಡಿದೆ. ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಕೃಷಿ ಉಪಕರಣಗಳನ್ನು ಒಂದು ಸ್ಥಳದಿಂದ ಮತ್ತೊಂದೆಡೆಗೆ ಸಾಗಾಟ ಮಾಡುವ ಮೂಲಕ ಇಲಾಖೆಯು ಆದಾಯವನ್ನು ಗಳಿಸಲು ಆರಂಭಿಸಿದೆ. ಕಳೆದ ಎರಡು ತಿಂಗಳಿನಿಂದಲೂ ಈ ಹೊಸ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದು, ಈಗಾಗಲೇ ಹಲವಾರು ಉಪಕರಣಗಳ ಸಾಗಾಟವನ್ನೂ ಮಾಡಿದೆ.
ರೈಲುಗಳ ಮೂಲಕ 410 ಟಿಲ್ಲರ್ ಗಳು, 18 ಟ್ರ್ಯಾಕ್ಟರ್ ಗಳು, 1936 ರಷ್ಟು ಇತರ ಕೃಷಿ ಸಂಬಂಧಿತ ವಸ್ತುಗಳನ್ನು ಮೊದಲ ಹಂತದಲ್ಲಿ ಅಸ್ಸಾಂ ನ ಚಾಂಗ್ ಸರ್ಗೆ, ಎರಡನೇ ಹಂತದಲ್ಲಿ 175 ಟ್ರ್ಯಾಕ್ಟರ್ ಗಳನ್ನು ಗುಜರಾತ್ ನ ಅಹಮದಾಬಾದಿಗೆ ಕಳುಹಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. ತಯಾರಕರೊಂದಿಗಿನ ನಿರಂತರ ಒಪ್ಪಂದದ ಮೂಲಕ ರೈಲ್ವೆಯು ಈ ಹೊಸ ಆದಾಯದ ಮೂಲವನ್ನು ಅನುಸರಣೆ ಮಾಡುತ್ತಿದೆ ಎಂದೂ ತಿಳಿಸಿದೆ.
ಜೂನ್ ತಿಂಗಳಿಗೆ ಸಂಬಂಧಿಸಿದಂತೆ ಈಗಾಗಲೇ 15 ಎನ್ಎಂಜಿ ರೇಕ್ಗಳನ್ನು ಲೋಡ್ ಮಾಡಲಾಗಿದೆ ಎಂದೂ ಇಲಾಖೆ ಮಾಹಿತಿ ನೀಡಿದೆ ಒಂದು ರೇಕ್ ಅಂದರೆ 25 ಬೋಗಿಗಳಿರುವ, 125 ಟ್ರ್ಯಾಕ್ಟರ್ ಗಳನ್ನು ಸಾಗಿಸಬಲ್ಲ ಸಾಮರ್ಥ್ಯವನ್ನು ಹೊಂದಿರಬಲ್ಲ ರೈಲು ಎಂದೂ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ ಈ ತಿಂಗಳಿನಲ್ಲಿ ಇನ್ನೂ ಎರಡು ರೇಕ್ ಗಳನ್ನು ಲೋಡ್ ಮಾಡುವ ನಿರೀಕ್ಷೆ ಇದೆ ಎಂದೂ ಇಲಾಖೆ ತಿಳಿಸಿದೆ. ಈ ಹಿಂದೆ ಒಂದು ತಿಂಗಳಿನಲ್ಲಿ ಆರ್ ಎನ್ಎಂಜಿ ರೇಕ್ಗಳನ್ನು ಲೋಡ್ ಮಾಡುವ ಮೂಲಕವೂ ರೈಲ್ವೆ ಸಾಮರ್ಥ್ಯ ಪ್ರದರ್ಶನ ಮಾಡಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಪ್ರಿಲ್ ನ ಲಾಕ್ಡೌನ್ ನಲ್ಲಿ ದೊಡ್ಡಬಳ್ಳಾಪುರದಿಂದ 2158 ಕಿ.ಮೀ ದೂರದ ಪುಲೆರಾಗೆ ಟ್ರ್ಯಾಕ್ಟರ್ ಗಳನ್ನು ಕಳುಹಿಸಿತ್ತು.
ಸೌತ್ ವೆಸ್ಟರ್ನ್ ರೈಲ್ವೆ ಯ ಪ್ರಕಾರ, ಕೊರೋನಾ ಲಾಕ್ಡೌನ್ ನಂತಹ ಆರ್ಥಿಕ ಕುಸಿತದ ಸಂದರ್ಭದಲ್ಲಿ SUV ಯ ಬೇಡಿಕೆಯು ಪರಿಣಾಮ ಬೀರಿದೆ. ಈ ನಡುವೆಯೂ ರೈಲ್ವೆ ದೆಹಲಿ, ಪೆನುಕೊಂಡ ಮೊದಲಾದೆಡೆಗೆ ಕೃಷಿ ಉಪಕರಣಗಳನ್ನು ಸಾಗಾಟ ನಡೆಸುವ ಮೂಲಕ ಇಲಾಖೆಗೆ ಆರ್ಥಿಕ ಸಬಲತೆಯನ್ನು ತಂದುಕೊಡುವಲ್ಲಿ ನೈರುತ್ಯ ರೈಲ್ವೆಯ ಬೆಂಗಳೂರು ಘಟಕ ಶ್ರಮ ವಹಿಸಿದೆ ಎಂದೂ ಇಲಾಖೆ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.