ಬೆಂಗಳೂರು: ದಿನ ಹೋದಂತೆ ಕೊರೋನಾವೈರಸ್ ಹೆಚ್ಚು ಹೆಚ್ಚು ವ್ಯಾಪಿಸುತ್ತಿದೆ. ಈ ಕಾರಣದಿಂದಲೇ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ತುರ್ತು ವಿಚಾರಣೆಗಳ ಕಾರಣಕ್ಕೆ ಜೂನ್ 15 ರಿಂದಲೇ ಅನ್ವಯವಾಗುವಂತೆ ನಿಗದಿ ಮಾಡಲಾದ ಮಾರ್ಗಸೂಚಿಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಎರಡು ವಾರಗಳವರೆಗೆ ಬೆಳಗ್ಗಿನ ಅವಧಿಯಲ್ಲಿ 10 ಕೇಸುಗಳ ವಿಚಾರಣೆ, ಅಪರಾಹ್ನ 10 ಕೇಸುಗಳ ವಿಚಾರಣೆ ಮಾತ್ರವೇ ನಡೆಯಲಿದೆ. 65 ವರ್ಷಕ್ಕಿಂತ ಹಿರಿಯ ವಕೀಲರು ವಾದ ಮಂಡನೆಗೆ ಇಚ್ಛಿಸಿದರೆ ಅವರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವಕಾಶವನ್ನು ಒದಗಿಸಲಾಗುತ್ತದೆ. ಜೊತೆಗೆ ನ್ಯಾಯಾಲಯದೊಳಕ್ಕೆ ಕೇವಲ ನ್ಯಾಯ ಮಂಡಿಸಲಿರುವ ವಕೀಲರಿಗೆ ಮಾತ್ರವೇ ಒಳಬರುವ ಅವಕಾಶ ಕಲ್ಪಿಸಲಾಗಿದೆ. 20ಕ್ಕಿಂತ ಅಧಿಕ ವಕೀಲರು ನ್ಯಾಯಾಲಯದ ಹಾಲ್ನಲ್ಲಿ ಇರುವಂತಿಲ್ಲ. ಸಾಕ್ಷ್ಯಗಳನ್ನು ವಿಡಿಯೋ ರೆಕಾರ್ಡ್ ಮಾಡಲಾಗುತ್ತದೆ ಎಂದೂ ಈ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಎರಡು ವಾರಗಳ ಕಾಲ ಇದೇ ಮಾರ್ಗಸೂಚಿ ಅನ್ವಯವಾಗಲಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಗಮನಿಸಿಕೊಂಡು ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಾಗೆಯೇ ತಾಲೂಕು ಮಟ್ಟದ ಕೋರ್ಟ್ ಗಳಲ್ಲಿ 50% ರಷ್ಟು ಕೋರ್ಟ್ ಗಳು ಜೂ. 15 ರಿಂದಲೇ ಕಾರ್ಯ ಆರಂಭಿಸುವಂತೆಯೂ ಈ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.