ಬೆಂಗಳೂರು: ಈಗಾಗಲೇ ಜನಪ್ರಿಯ ‘ಮಹಾಭಾರತ’ ಹಿಂದಿ ಧಾರಾವಾಹಿಯು ಕನ್ನಡದಲ್ಲಿ ಪ್ರಸಾರ ಕಂಡು ಅಭೂತಪೂರ್ವ ಯಶಸ್ಸನ್ನು ಕಾಣುತ್ತಿದೆ. ಇದರ ಬೆನ್ನಲ್ಲೇ ಇದೀಗ ರಮಾನಂದ್ ಸಾಗರ್ ಅವರ ನಿರ್ಮಾಣದ ರಾಮಾಯಣ ಧಾರವಾಹಿ ಕೂಡ ಕನ್ನಡದಲ್ಲಿ ಪ್ರಸಾರಗೊಳ್ಳಲು ಸಜ್ಜಾಗಿದೆ. ಹಿಂದಿ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದವರಿಗೆ ಕನ್ನಡದಲ್ಲೇ ಐತಿಹಾಸಿಕ ಧಾರಾವಾಹಿಯನ್ನು ವೀಕ್ಷಿಸುವ ಸುವರ್ಣಾವಕಾಶ ಈಗ ಒದಗಿ ಬಂದಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲೇ ರಮಾನಂದ್ ಸಾಗರ್ ಅವರ ರಾಮಾಯಣ ಧಾರವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರಗೊಳ್ಳಲಿದೆ. ಈ ಮೂಲಕ ಈಗಾಗಲೇ ಕನ್ನಡಕ್ಕೆ ಡಬ್ ಆಗಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಕಾರ್ಯಕ್ರಮಗಳಾದ ಮಾಲ್ಗುಡಿ ಡೇಸ್, ಮಹಾಭಾರತ, ರಾಧಾಕೃಷ್ಣ ಧಾರವಾಹಿಗಳ ಸಾಲಿಗೆ ಐತಿಹಾಸಿಕ ರಾಮಾಯಣ ಕೂಡ ಸೇರಿಕೊಳ್ಳಲಿದೆ.
“ರಾಮಾಯಣ ಧಾರವಾಹಿ ಯಾವಾಗ ಆರಂಭವಾಗಲಿದೆ ಎಂಬುದನ್ನು ನಾವು ಇನ್ನೂ ಪ್ರಕಟಗೊಳಿಸಿಲ್ಲ. ವಾರಂತ್ಯದಲ್ಲಿ ಮಾತ್ರ ಪ್ರಸಾರ ಮಾಡಬೇಕೋ ಅಥವಾ ಪ್ರೈಮ್ ಟೈಮ್ ನಲ್ಲಿ ವಾರವಿಡೀ ಪ್ರಸಾರ ಮಾಡಬೇಕು ಎಂಬುದು ಇನ್ನಷ್ಟೇ ತೀರ್ಮಾನ ಆಗಬೇಕಿದೆ” ಒಂದು ಸ್ಟಾರ್ ಸುವರ್ಣ ಟಿವಿ ಮೂಲಗಳು ತಿಳಿಸಿವೆ.
ಮಹಾಭಾರತದ ಕನ್ನಡ ಅವತರಣಿಕೆ ಸಿಕ್ಕ ಅಭೂತಪೂರ್ವ ಬೆಂಬಲವೇ ರಾಮಾಯಣವನ್ನು ಕೂಡ ಕನ್ನಡಕ್ಕೆ ಡಬ್ ಮಾಡಲು ಪ್ರೇರೇಪಿಸಿದೆ. ಈಗಾಗಲೇ ರಾಮಾನಂದ್ ಸಾಗರ್ ಅವರ ರಾಮಾಯಣ ಲಾಕ್ ಡೌನ್ ಸಂದರ್ಭದಲ್ಲಿ ಮರು ಪ್ರಸಾರಗೊಂಡು ಅಭೂತಪೂರ್ವ ಬೆಂಬಲವನ್ನು ಗಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.