News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಥಿಂಕರ್ಸ್ ಫೋರಂನಿಂದ ರಕ್ತದಾನ ಶಿಬಿರ

ಮೇ 30 ರ ಶನಿವಾರದಂದು ಬೆಂಗಳೂರಿನ ಕೋರಮಂಗಲ ನಗರದ 5ನೇಯ ಬಡಾವಣೆಯ ಗಣಪತಿ ದೇವಸ್ಥಾನ ಆವರಣದ ಜ್ಞಾನ ಮಂದಿರದಲ್ಲಿ ಥಿಂಕರ್ಸ್ ಫೋರಂ ವತಿಯಿಂದ ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು, ಮುಖ್ಯ ಅತಿಥಿಗಳಾಗಿ ಕೋರಮಂಗಲ ಆರೆಸೆಸ್‌ನ ಸಂಘಚಾಲಕರಾದ ಶ್ರೀ. ತಿರುಮಲೈ, ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ.ಕೆ.ಕೆ.ಪ್ರಕಾಶ್ ಮತ್ತು ಬೆಂಗಳೂರು ನಗರದ ಆಗ್ನೇಯ ವಿಭಾಗದ ಪೋಲಿಸ್ ಆಯುಕ್ತರಾದ ಶ್ರೀ. ಶ್ರೀನಾಥ ಜೋಶಿರವರು ಭಾಗವಸಿದ್ದರು.

ಶಿಬಿರ ಉದ್ಘಾಟಿಸಿ ಮಾತನಾಡಿದ ಪೋಲಿಸ್ ಆಯುಕ್ತ ಜೋಶಿರವರು ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠದಾನಎಂದು ಹೇಳಿದರು. ಅಲ್ಲದೇ ಜಗತ್ತಿಗೆ ವಕ್ಕರಿಸಿರುವ ಮಹಾಮಾರಿ ಕೋರೊನಾರೋಗದ ಕಠಿಣ ಪರಿಸ್ಥಿತಿಯಲ್ಲಿ ರೋಗಿಗಳಿಗೆ, ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ತುಂಬಾ ಇದ್ದು ಸಾರ್ವಜನಿಕರು ರಕ್ತದಾನಕ್ಕೆ ಹಿಂಜರಿಯುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಶಿಬಿರ ಆಯೋಜಿಸಿರುವ ಥಿಂಕರ್ಸ್ ಫೋರಂ, ನವ ಬೆಂಗಳೂರು ಪೌಂಡೆಶನ್‌ ತಂಡದ ಪ್ರಯತ್ನವನ್ನು ಮುಕ್ತವಾಗಿ ಶ್ಲಾಘಿಸಿದರು, ಶಿಬಿರದಲ್ಲಿ 100 ಹೆಚ್ಚು ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top