ನವದೆಹಲಿ: ಮಾನವ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಕಾರಣ ಜಗತ್ತಿನಾದ್ಯಂತ ಇತರ ಹಲವು ರಾಷ್ಟ್ರಗಳಲ್ಲಿ ದೀರ್ಘಕಾಲದಿಂದಲೂ ನಿಷೇಧಿಸಲಾಗಿದ್ದರೂ, ಭಾರತದಲ್ಲಿ ಮಾತ್ರ ಬಳಸಲು ಅನುಮತಿಸಲಾಗಿರುವ 27 ಕ್ಕೂ ಹೆಚ್ಚು ಕೀಟನಾಶಕಗಳ ಬಳಕೆಯನ್ನು ನಿಷೇಧಿಸಲು ಭಾರತ ಸರ್ಕಾರ ಸಿದ್ಧವಾಗಿದೆ ಎಂದು ವರದಿಗಳು ತಿಳಿಸಿವೆ.
ಇದಕ್ಕಾಗಿ ಕರಡು ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು 45 ದಿನಗಳ ಅವಧಿಯೊಳಗೆ ಸಂಬಂಧಿತರಿಂದ ಆಕ್ಷೇಪಣೆ ಅಥವಾ ಸಲಹೆಗಳನ್ನು ಕೋರಿ ಹೊರಡಿಸಿದೆ. ಈ ನಿಟ್ಟಿನಲ್ಲಿ ಜುಲೈನಲ್ಲಿ ಸರ್ಕಾರ ಅಂತಿಮ ಆದೇಶ ಹೊರಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ನಿಷೇಧವು ಜಾರಿಗೆ ಬಂದ ನಂತರ, ಭಾರತದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಈ ಕೀಟನಾಶಕಗಳನ್ನು ಆಮದು ಮಾಡಲು, ತಯಾರಿಸಲು, ಮಾರಾಟ ಮಾಡಲು, ಸಾಗಿಸಲು, ವಿತರಿಸಲು ಅಥವಾ ಬಳಸಲು ಅನುಮತಿ ಇರುವುದಿಲ್ಲ.
ಈಗಾಗಲೇ 32 ರಾಷ್ಟ್ರಗಳಲ್ಲಿ ನಿಷೇಧಿಸಲಾಗಿರುವ ಅಸೆಫೇಟ್, ಮೀನಿಗೆ ಮತ್ತು ಜಲಚರಗಳಿಗೆ ಹಾನಿಕಾರಕವಾಗಿರುವ ಅಟ್ರಾಝೆನ್ ಮತ್ತು 28 ರಾಷ್ಟ್ರಗಳಲ್ಲಿ ನಿಷೇಧಿತವಾದ ಬೆನ್ಫುರಾಕಾರ್ಬ್ ಮತ್ತು ಇನ್ನೂ ಹಲವಾರು ಕೀಟನಾಶಕಗಳು ಸೇರಿವೆ.
ಈ ಹಾನಿಕಾರಕ ಕೀಟನಾಶಕಗಳ ಬಳಕೆಯನ್ನು ನಿಗ್ರಹಿಸುವುದು 18 ಕೀಟನಾಶಕಗಳನ್ನು ನಿಷೇಧಿಸುವ ಸರ್ಕಾರದ ಹಿಂದಿನ ಕ್ರಮವನ್ನು ಅನುಸರಿಸುತ್ತದೆ. ಆಗಸ್ಟ್ 2018 ರ ಆದೇಶವನ್ನು ಜಾರಿಗೊಳಿಸಿದ ನಂತರ 18 ಕೀಟನಾಶಕಗಳಲ್ಲಿ ಹನ್ನೆರಡು ನಿಷೇಧಿಸಲಾಗಿದೆ, ಆದರೆ ಇತರ ಆರು ಕೀಟನಾಶಕಗಳನ್ನು 2020 ಡಿಸೆಂಬರ್ 31 ರ ನಂತರ ಬಳಕೆಗೆ ತರಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.