ದಾವಣಗೆರೆ: ರಂಜಾನ್ ಪ್ರಯುಕ್ತ ನಗರದ ಅಕ್ಕಮಹಾದೇವಿ ರಸ್ತೆಯ ಪ್ರತಿಷ್ಠಿತ ಹಿಂದೂ ಅಂಗಡಿಯೊಂದಕ್ಕೆ ಬಟ್ಟೆ ಕೊಳ್ಳಲು ಹೋಗಿದ್ದ ಮುಸ್ಲಿಂ ಮಹಿಳೆಯರಿಗೆ, ಮುಸ್ಲಿಂ ಯವಕರ ಗುಂಪೊಂದು ಬೆದರಿಕೆ ಹಾಕಿದೆ. ಮಹಿಹೆಯರಿಬ್ಬರನ್ನು ರಸ್ತೆಯಲ್ಲಿಯೇ ತಡೆದು, ಸುತ್ತುವರಿದು ಅವರಿಬ್ಬರನ್ನು ಹಿಂದೂ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಮುಂದಾಗಿದ್ದಕ್ಕೆ ತರಾಟೆಗೆ ತೆಗೆದುಕೊಂಡ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಟೀಕೆಗೆ ಒಳಗಾಗಿದೆ.
ಗುಂಪಿನಲ್ಲಿದ್ದವರು ಮಹಿಳೆಯರ ಕೈಯಲ್ಲಿದ್ದ ಬ್ಯಾಗ್ಗಳನ್ನು ಕಿತ್ತುಕೊಂಡು, ಅವರಿಗೆ ಬೆದರಿಕೆ ಹಾಕುತ್ತಿರುವ ದೃಶ್ಯ ಆ ವಿಡಿಯೋದಲ್ಲಿ ದಾಖಲಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೂ ತುತ್ತಾಗಿದೆ. ಘಟನೆಯ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಸೈಯ್ಯದ್ ಅಹ್ಮದ್ ಮತ್ತು ಫಯಾಜ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಮಹಿಳೆಯರಿಗೆ ಬೆದರಿಕೆ ಹಾಕಿರುವ ಕುರಿತಂತೆ ಪ್ರಕರಣ ದಾಖಲಿಸಿರುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹನುಮಂತರಾಯ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ, ‘ ಕರ್ನಾಟಕ ಇಸ್ಲಾಮಿಕ್ ರಾಜ್ಯವೇ?.. ಹಿಂದೂ ಧರ್ಮೀಯರ ಅಂಗಡಿಯಿಂದ ಬಟ್ಟೆ ಖರೀದಿಸಿದರೆಂಬ ಮಾತ್ರಕ್ಕೆ ಮುಸ್ಲಿಂ ಉದ್ರಿಕ್ತರ ಗುಂಪು ಮುಸ್ಲಿಂ ಮಹಿಳೆಯರ ಮೇಲೆ ಬೆದರಿಕೆ ಹಾಕಿದ್ದಾರೆ. ಇಂತಹ ಧರ್ಮಾಂದರಿಗೆ ಭಾರತದ ಕಾನೂನಿನ ರುಚಿ ತೋರಿಸಬೇಕು. ಇಂತಹ ಗಲಭೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಬೇಕು’ ಎಂಬುದಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿ ತಿಳಿಸಿದ್ದಾರೆ.
Whether Karnataka is an Islamic Republic!!!???
Radicals threatening Muslim women for purchasing garments from a Hindu’s shop in Davangere!
These religious extremists who are enforcing sharia in a democratic nation must be given the taste of Indian law!@AmitShah @HMOIndia pic.twitter.com/Swviv3Uzrw
— Shobha Karandlaje (@ShobhaBJP) May 17, 2020
ಇನ್ನು ಘಟನೆಗೆ ಸಂಬಂಧಿಸಿದಂತೆ ಸಚಿವ ಎಂಪಿ ರೇಣುಕಾಚಾರ್ಯ ಸಹ ಟ್ವೀಟ್ ಮಾಡಿದ್ದು, ‘ದಾವಣಗೆರೆಯ ಕೆಲವೆಡೆ ಹಿಂದೂ ಅಂಗಡಿಗಳಿಗೆ ಖರೀದಿಗೆ ತೆರಳಿದ್ದ ಮುಸ್ಲಿಂ ಮಹಿಳೆಯರನ್ನು ತಡೆದು, ವ್ಯಾಪಾರ ಮಾಡದಂತೆ ನಿಲ್ಲಿಸಿ, ವಾಪಸ್ಸು ಕಳುಹಿಸುತ್ತಿರುವ ಘಟನೆ ಖಂಡನೀಯ. ಹಿಂದೂಗಳೂ ಹೀಗೆಯೇ ಮುಸ್ಲಿಮರಿಂದ ಏನೂ ಕೊಳ್ಳುವುದಿಲ್ಲ ಎಂದು ನಿರ್ಧರಿಸಿದರೆ ನಿಮ್ಮ ಪರಿಸ್ಥಿತಿ ಆಲೋಚನೆ ಮಾಡಿ. ಸಮಾಜದಲ್ಲಿ ಸ್ನೇಹ, ಸೌಹಾರ್ದತೆ, ಸಾಮರಸ್ಯದಿಂದಿರಿ’ ಎಂದು ತಿಳಿಸಿದ್ದಾರೆ.
ಇನ್ನು ಇಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿಯೂ ನಡೆದಿದ್ದು, ಹಿಂದೂ ಅಂಗಡಿಗೆ ತೆರಳಿ ಖರೀದಿ ಮಾಡಿದರೆಂದು ಉದ್ರಿಕ್ತ ಯುವಕರ ಗುಂಪೊಂದು ಮಹಿಳೆಯನ್ನು ಸುತ್ತುವರಿದು ಬೆದರಿಸುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ. ಎಲ್ಲರೂ ಹಿಂದೂ ಮುಸ್ಲಿಮರು ಸಹೋದರರಂತೆ ಎಂದು ಹೇಳುತ್ತಾರೆ. ಆದರೆ ಅವರು ನಮ್ಮ ಬೆನ್ನಿಗೆ ಚೂರಿ ಹಾಕುವುದು ಮಾತ್ರ ಅರಿವಿಗೆ ಬರುವುದಿಲ್ಲ ಎನ್ನುತ್ತಾ, ಇನ್ನೂ ಅನೇಕ ಅವಾಚ್ಯ ಶಬ್ಧಗಳಿಂದ ಹಿಂದೂಗಳನ್ನು ನಿಂದಿಸುತ್ತಾ ಆ ಮಹಿಳೆಗೆ ಬೆದರಿಕೆ ಒಡ್ಡುವ ದೃಶ್ಯಗಳು ದಾಖಲಾಗಿದೆ.
ಅಲ್ಲದೆ ಈ ಬಗ್ಗೆ ಮುಸ್ಲಿಂ ಧಾರ್ಮಿಕ ನಾಯಕರಿಗೆ, ಮುಸ್ಲಿಂ ಪುಂಡರ ಇಂತಹ ಪುಂಡಾಟಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇಂತಹ ಘಟನೆಗಳ ನಾಲ್ಕು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗಲಭೆಕೋರರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.