ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಲಾಕ್ ಡೌನ್ ಅನ್ನು ಘೋಷಣೆ ಮಾಡಿದ ಬಳಿಕ ಸಾರ್ವಜನಿಕ ಸಾರಿಗೆಗಳು ಬಂದ್ ಆಗಿದ್ದವು. ಜನರ ಓಡಾಟವನ್ನು ನಿಗ್ರಹಿಸುವ ಸಲುವಾಗಿ ಇಂತಹದೊಂದು ಕಠಿಣ ನಿರ್ಧಾರ ಅನಿವಾರ್ಯವೂ ಆಗಿತ್ತು.
ಪ್ರಸ್ತುತ ಕೂಡ ದೇಶದ ಎಲ್ಲ ರಾಜ್ಯಗಳಲ್ಲೂ ಬಸ್ ಸೇರಿದಂತೆ ಇತರ ಸಾರಿಗೆ ಸಂಚಾರ ಬಂದ್ ಆಗಿದೆ. ಆದರೆ ಶುಕ್ರವಾರದಿಂದ ಹರಿಯಾಣದಲ್ಲಿ ರಾಜ್ಯದೊಳಗೆ ಸಾರ್ವಜನಿಕ ಬಸ್ ಸಂಚಾರ ಪ್ರಾರಂಭಗೊಂಡಿದೆ. ಈ ಮೂಲಕ ಬಸ್ ಸಂಚಾರ ಪುನರಾರಂಭ ಮಾಡಿದ ಮೊದಲ ರಾಜ್ಯವಾಗಿ ಹರಿಯಾಣ ಹೊರಹೊಮ್ಮಿದೆ.
“ನಾವು ನಮ್ಮ ರಾಜ್ಯದ ಜನರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ನಮ್ಮ ರಾಜ್ಯದ ಜನರು ಅನೇಕ ಜಿಲ್ಲೆಗಳಲ್ಲಿ, ತಮ್ಮದಲ್ಲದ ಊರುಗಳಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಅವರು ತಮ್ಮ ಊರಿಗೆ ಸುಗಮವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾವು ಅಂತರ್-ಜಿಲ್ಲಾ ಬಸ್ ಸೇವೆಗಳನ್ನು ಆರಂಭ ಮಾಡಿದ್ದೇವೆ” ಎಂದು ಹರಿಯಾಣ ಪೊಲೀಸ್ ಮುಖ್ಯಸ್ಥ ಮನೋಜ್ ಯಾದವ್ ಹೇಳಿದ್ದಾರೆ.
ಆದರೆ ಈ ಅಂತರಜಿಲ್ಲಾ ಬಸ್ಗಳು ಕೇವಲ ತಮ್ಮ ಗಮ್ಯಸ್ಥಾನಗಳಲ್ಲಿ ಮಾತ್ರ ನಿಲುಗಡೆಯಾಗಲಿದೆ. ಮಧ್ಯಮಧ್ಯ ಎಲ್ಲೂ ಸ್ಟಾಪ್ ನೀಡುವುದಿಲ್ಲ. ಟಿಕೆಟ್ಗಳನ್ನು ಆನ್ಲೈನ್ ಮೂಲಕ ಬುಕ್ ಮಾಡಬೇಕಾಗುತ್ತದೆ.
ಮೊದಲ ದಿನ 8 ಡಿಪೋಗಳ ಹಲವು ಬಸ್ಗಳು ವಿವಿಧ ಮಾರ್ಗಗಳಲ್ಲಿ ಸಂಚಾರ ನಡೆಸಿದೆ. ಈ ಮೊದಲು 29 ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಲು ಹರಿಯಾಣ ನಿರ್ಧರಿಸಿತ್ತು. ಆದರೆ ಬಳಿಕ 9 ಮಾರ್ಗಗಳನ್ನು ಬುಕಿಂಗ್ ಇಲ್ಲದ ಕಾರಣ ರದ್ದುಪಡಿಸಿತು.
ಹರಿಯಾಣ ಕಳೆದ ಒಂದು ವಾರಗಳಿಂದ ಸುಮಾರು 1 ಲಕ್ಷ ವಲಸಿಗರನ್ನು ಅವರ ರಾಜ್ಯಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.