ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಮಯನ್ಮಾರ್ ನಡುವೆ ವೃದ್ಧಿಯಾಗುತ್ತಿರುವ ಬಾಂಧವ್ಯದ ಸಂಕೇತವಾಗಿ, ಶುಕ್ರವಾರ ಮಯನ್ಮಾರ್ 22 ಮೋಸ್ಟ್ ವಾಂಟೆಡ್ ಈಶಾನ್ಯ ಬಂಡುಕೋರರನ್ನು ಭಾರತಕ್ಕೆ ಮಾಡಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸ್ವತಃ ಮುಂದೆ ನಿಂತು ನಡೆಸಿದ ಕಾರ್ಯಾಚರಣೆಯ ಫಲಶ್ರುತಿಯಾಗಿ, ಮಯನ್ಮಾರ್ 22 ಬಂಡುಕೋರರರನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕಳುಹಿಸಿಕೊಟ್ಟಿದೆ. ಈ ವಿಮಾನ ಮೊದಲು ಮಣಿಪುರದ ಇಂಫಾಲಕ್ಕೆ ಬಂದಿಳಿದಿದೆ. ನಂತರ ಅಸ್ಸಾಮಿನ ಗುವಾಹಟಿಗೆ ಬಂದು ಇಳಿದಿದೆ. ಬಳಿಕ ಬಂಡುಕೋರರನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ.
22 ಬಂಡುಕೋರರು ಅಸ್ಸಾಂ ಮತ್ತು ಮಣಿಪುರದಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದರು. ಬಂಡುಕೋರರ ಹಸ್ತಾಂತರ ಪ್ರಕ್ರಿಯೆಯು ಮಹತ್ವದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯಾಕೆಂದರೆ ಇದೇ ಮೊದಲ ಬಾರಿಗೆ ಈಶಾನ್ಯ ಬಂಡುಕೋರರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಭಾರತ ಸರ್ಕಾರ ಮಾಡಿದ ಮನವಿಗೆ ಕ್ರಮ ಕೈಗೊಂಡಿದೆ. ನೆರೆಹೊರೆಯ ರಾಷ್ಟ್ರಗಳ ನಡುವೆ ಗುಪ್ತಚರ ವಿನಿಮಯ ಮತ್ತು ರಕ್ಷಣಾ ಸಹಕಾರವನ್ನು ಇದು ಪ್ರತಿಬಿಂಬಿಸುತ್ತದೆ.
ಮಯನ್ಮಾರ್ನಿಂದ ಭಾರತಕ್ಕೆ ಬಂದಿರುವ 22 ಬಂಡುಕೋರರ ಪೈಕಿ 12 ಮಂದಿ ಮಣಿಪುರದ ನಾಲ್ಕು ಬಂಡುಕೋರ ಸಂಘಟನೆಗಳಾದ UNLF, PREPAK, KYKL ಮತ್ತು PLA ಗೆ ಸೇರಿದವರಾಗಿದ್ದಾರೆ. ಉಳಿದ ಹತ್ತು ಮಂದಿ ಅಸ್ಸಾಂ ಮೂಲದ ಬಂಡುಕೋರ ಸಂಘಟನೆಗಳಾದ NDFB ಮತ್ತು KLOಗೆ ಸೇರಿದವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.