ನವದೆಹಲಿ: ಬಾಬಾ ರಾಮ್ದೇವ್ ಅವರ ಜನಪ್ರಿಯ ಪತಂಜಲಿ ಆಯುರ್ವೇದ ಸಂಸ್ಥೆಯು ಇದೀಗ ಇ-ಕಾಮರ್ಸ್ ವೇದಿಕೆಯನ್ನು ಆರಂಭಿಸಲಿದೆ. ಆರ್ಡರ್ ಮಿ ಎಂಬ ಹೆಸರನ್ನು ಇದಕ್ಕೆ ಇಡಲಾಗಿದೆ. ಸ್ವದೇಶಿ ವಸ್ತುಗಳನ್ನು ಈ ವೇದಿಕೆಯಲ್ಲಿ ಮಾರಾಟ ಮಾಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ್ ಭಾರತ ಪ್ಯಾಕೇಜನ್ನು ಘೋಷಣೆ ಮಾಡಿದ ಸಂದರ್ಭದಲ್ಲಿ, ಸ್ಥಳೀಯ ಉತ್ಪನ್ನಗಳನ್ನು ಹೆಚ್ಚು ಬಳಸುವಂತೆ ಮತ್ತು ಪ್ರಚಾರ ಪಡಿಸುವಂತೆ ಕರೆ ನೀಡಿದ್ದರು. ಮೋದಿ ಕರೆ ನೀಡಿದ 40 ಗಂಟೆಗಳ ಒಳಗೆ ಪತಂಜಲಿ ಸಂಸ್ಥೆಯು ಇ-ಕಾಮರ್ಸ್ ವೇದಿಕೆಯನ್ನು ಆರಂಭಿಸಲು ಸಜ್ಜಾಗಿದೆ.
ಆರ್ಡರ್ ಮಿ ವೇದಿಕೆಯಲ್ಲಿ ಪತಂಜಲಿ ಸಂಸ್ಥೆಯ ಎಲ್ಲಾ ಆಯುರ್ವೇದ ಉತ್ಪನ್ನಗಳು ಮಾರಾಟವಾಗಲಿದೆ. ಮಾತ್ರವಲ್ಲದೆ ಇತರ ಭಾರತೀಯ ಸ್ಥಳೀಯ ಉತ್ಪನ್ನಗಳು ಕೂಡ ಇದರಲ್ಲಿ ಮಾರಾಟವಾಗಲಿದೆ.
ಮುಂದಿನ 15 ದಿನಗಳೊಳಗೆ ಈ ಇ-ಕಾಮರ್ಸ್ ವೇದಿಕೆಯು ಜನರಿಗೆ ಲಭ್ಯವಾಗುವ ಸಾಧ್ಯತೆ ಇದೆ. ಕೆಲವೇ ಗಂಟೆಗಳಲ್ಲಿ ಉಚಿತ ಡೆಲಿವರಿಯೊಂದಿಗೆ ಇದು ನಮ್ಮ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಂದುಕೊಡಲಿದೆ.
ಮಾತ್ರವಲ್ಲದೆ, ಈ ವೇದಿಕೆಯಡಿ ದಿನದ 24 ಗಂಟೆ 1,500 ಪತಂಜಲಿ ವೈದ್ಯರುಗಳು ಜನರಿಗೆ ಉಚಿತ ವೈದ್ಯಕೀಯ ಸಲಹೆಗಳನ್ನು ನೀಡಲಿದ್ದಾರೆ ಮತ್ತು ಯೋಗ ಕಲಿಸಲಿದ್ದಾರೆ.
ಈ ಬೆಳವಣಿಗೆಯನ್ನು ಪತಂಜಲಿ ಆಯುರ್ವೇದ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಅವರು ಖಚಿತಪಡಿಸಿದ್ದಾರೆ. ಈ ವೇದಿಕೆಯಡಿ ಸ್ವದೇಶಿ ವಸ್ತುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.