ಬೆಳಗಾವಿ : ಕೋವಿಡ್ – 19 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗೆ ನೆರವಾಗುವ ದೃಷ್ಟಿಯಿಂದ ತಯಾರಿಸಲಾದ ಸಿಸಿ ಕ್ಯಾಮಾರಾ ಮತ್ತು ಮೊಬೈಲ್ ಆಧಾರಿತ ರೋಬೊಟ್ ಅನ್ನು ಜಿಲ್ಲಾಡಳಿತಕ್ಕೆ ಮಂಗಳವಾರ ಕೇಂದ್ರ ಸಚಿವ ಸುರೇಶ್ ಅಂಗಡಿ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಸೇವಾಭಾರತಿಯ ಪದಾಧಿಕಾರಿಗಳು ನೀಡಿದರು.
ನಿಪ್ಪಾಣಿಯ ಭಾರತೀಯ ವಿಚಾರ ಮಂಚ್ನ ಇಂಜಿನಿಯರ್ಗಳು ಕೂಡಿ ಆವಿಷ್ಕಾರಿಸಿದ 2.6 ಅಡಿ ಉದ್ದ ಮತ್ತು ಅಗಲ ಹೊಂದಿರುವ ಈ ರೋಬೊಟ್ ಆಸ್ಪತ್ರೆಯಲ್ಲಿ ಕೋವಿಡ್ -19 ಸೋಂಕಿತರಿಗೆ ಊಟ- ಉಪಾಹಾರ ಔಷಧಿ ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಆಸ್ಪತ್ರೆ ಸಿಬ್ಬಂದಿ ಬದಲಾಗಿ ಈ ರೋಬೊಟ್ ಅನ್ನು ಬಳಸಬಹುದಾಗಿದೆ. ಈ ರೋಬೊಟ್ ಬ್ಯಾಟರಿ ಆಧಾರಿತವಾಗಿತ್ತು 7 ಗಂಟೆಯಷ್ಟು ಕೆಲಸ ಮಾಡುವ ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಸೋಂಕಿತರಿಗೆ ಬಟ್ಟೆ- ಹೊದಿಕೆ, ಬೆಡ್ಶೀಟ್ ಮತ್ತು ಇತರೆ ಅಗತ್ಯ ವಸ್ತುಗಳನ್ನು ಹೊತ್ತು ಒಯ್ಯಬಲ್ಲದು. ಅಂತರ್ಜಾಲ ನೆರವಿನಿಂದ ಮೊಬೈಲ್ ಮೂಲಕ ಎಷ್ಟೆ ದೂರದಿಂದಲೂ ಇದನ್ನು ಆಪ್ರೇಟ್ ಮಾಡಬಹುದು. ಶೈಲೇಂದ್ರ ಪಾರಿಕ್ ನೇತೃತ್ವದಲ್ಲಿ ತುಳಸಿದಾಸ ಸಾಂಳುಖೆ, ಭರತ ಕುರಪೆ ಮತ್ತು ಭಾನುದಾಸ ಸಾಂಳುಖೆ ಅಂದಾಜು ರೂ. 40 ಸಾವಿರ ವೆಚ್ಚದಲ್ಲಿ ಈ ರೋಬೊಟ್ ಅನ್ನು ನಿರ್ಮಿಸಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈ ರೋಬೊಟ್ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿದ್ದಾರೆ.
ಕೇಂದ್ರ ಸಚಿವ ಸುರೇಶ್ ಅಂಗಡಿ ಮಾತನಾಡಿ, ಜಿಲ್ಲೆಯ ಪ್ರತಿಭಾನ್ವಿತ ಎಂಜಿನಿಯರ್ಗಳು ರೂಪಿಸಿದ ಈ ರೋಬೊಟ್ ಅನ್ನು ಆಸ್ಪತ್ರೆಯಲ್ಲಿ ಬಳಸಲಾಗುವುದು ಮತ್ತು ಅವರಿಗೆ ಈ ರೋಬೊಟ್ ಅನ್ನು ಅಭಿವೃದ್ಧಿ ಪಡಿಸಲು ಕೂಡಾ ಸರ್ಕಾರದಿಂದ ಸೂಕ್ತ ನೆರವು ಒದಗಿಸಲಾಗುವುದು ಎಂದರು.
ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ, ಮಾಜಿ ಶಾಸಕ ಸಂಜಯ ಪಾಟೀಲ, ಆರ್ಎಸ್ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ಪರಮೇಶ್ವರ ಹೆಗಡೆ, ಬೆಳಗಾವಿ ಗ್ರಾಮೀಣ ಜಿಲ್ಲಾ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.