ನವದೆಹಲಿ: ‘ಟೂರ್ ಆಫ್ ಸಾಮಾನ್ಯ ನಾಗರಿಕರಿಗೆ 1.3 ಮಿಲಿಯನ್ ಸಿಬ್ಬಂದಿಗಳ ಬಲಿಷ್ಠ ಪಡೆಯನ್ನು ಮೂರು ವರ್ಷಗಳವರೆಗೆ ಸೇರಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಚಿಂತನೆ ಆರಂಭಿಸಿದೆ.
ಈ ಮಹತ್ವದ ಪ್ರಸ್ತಾಪದ ಬಗ್ಗೆ ಸೇನೆಯ ಉನ್ನತ ಅಧಿಕಾರಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ” ಇದಕ್ಕೆ ಅನುಮೋದನೆ ನೀಡಿದರೆ ಅದು ಸ್ವಯಂಪ್ರೇರಿತ ಆಯ್ಕೆ ಆಗಿರುತ್ತದೆ ಮತ್ತು ಆಯ್ಕೆ ಮಾನದಂಡಗಳಲ್ಲಿ ಯಾವುದೇ ಸಡಿಲಿಕೆಗಳು ಇರುವುದಿಲ್ಲ. ಆರಂಭದಲ್ಲಿ, ಯೋಜನೆಯ ಪರೀಕ್ಷಾ ಭಾಗವಾಗಿ 100 ಅಧಿಕಾರಿಗಳು ಮತ್ತು 1,000 ಪುರುಷರನ್ನು ನೇಮಕಾತಿಗೆ ಪರಿಗಣಿಸಲಾಗುತ್ತದೆ” ಎಂದು ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ.
ಅತ್ಯುತ್ತಮ ಪ್ರತಿಭೆಗಳನ್ನು ಸೇನೆಗೆ ಸೆಳೆಯುವುದು ಮತ್ತು ಮಿಲಿಟರಿ ಜೀವನವನ್ನು ಅನುಭವಿಸಲು ಅವಕಾಶವನ್ನು ನೀಡುವ ಮೂಲಕ ನಾಗರಿಕ ಸಮಾಜವನ್ನು ಸೇನೆಗೆ ಹತ್ತಿರವಾಗುವಂತೆ ಮಾಡುವುದು ಯೋಜನೆಯ ಹಿಂದಿರುವ ಉದ್ದೇಶವಾಗಿದೆ. ಈ ಯೋಜನೆಗೆ ಹಸಿರು ನಿಶಾನೆ ಸಿಕ್ಕರೆ, ಮಿಲಿಟರಿ ಜೀವನವನ್ನು ಅನುಭವಿಸಲು ಬಯಸುವ ಆದರೆ ಅದನ್ನು ಪೂರ್ಣ ಮರು ಪ್ರಮಾಣದ ವೃತ್ತಿಯನ್ನಾಗಿ ಸ್ವೀಕರಿಸಲು ಇಚ್ಚಿಸದ ಯುವ ಪೀಳಿಗೆ ಒಂದು ಅತ್ಯುತ್ತಮ ಅವಕಾಶ ದೊರೆತಂತೆ ಆಗುತ್ತದೆ.
ರಕ್ಷಣಾ ಸ್ಥಾಯಿ ಸಮಿತಿಯ 2019 ರ ವರದಿಯ ಪ್ರಕಾರ, ಭಾರತೀಯ ಸೇನೆಯಲ್ಲಿ ಅಧಿಕಾರಿ ಕೇಡರ್ ಕೊರತೆಯು ಅಂದಾಜು ಶೇಕಡಾ 14 ರಷ್ಟಿದೆ. ಸೇನೆಯಲ್ಲಿ 42,253 ಅಧಿಕಾರಿಗಳು ಮತ್ತು 11.94 ಲಕ್ಷ ಯೋಧರು ಇದ್ದಾದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಾರತೀಯ ನೌಕಾಪಡೆಯು 10,000 ಅಧಿಕಾರಿಗಳನ್ನು, 57,310 ಸಿಬ್ಬಂದಿಗಳನ್ನು ಹೊಂದಿದೆ.
ಕಿರು ಸೇವಾ ಆಯೋಗದ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಗರಿಷ್ಠ 10 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬಹುದು.
ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಯೋಧರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಒಲವು ತೋರಿಸುತ್ತಿದ್ದಾರೆ. ಸೇನಾ ಯೋಧರ ಮತ್ತು ಭಾರತೀಯ ವಾಯುಪಡೆ (ಐಎಎಫ್) ಮತ್ತು ಭಾರತೀಯ ನೌಕಾಪಡೆಯ ಸಿಬ್ಬಂದಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಬೇಕು ಎಂದು ರಾವತ್ ಪುನರುಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.