ಶ್ರೀನಗರ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತು ತರುವ ಭಾರತದ ವಿಶೇಷ ವಿಮಾನವು ಇಂದು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಶ್ರೀನಗರಕ್ಕೆ ಬಂದಿಳಿಯಲಿದೆ.
‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ಬಾಂಗ್ಲಾದೇಶದಲ್ಲಿ ಕೊರೋನಾವೈರಸ್ ಕಾರಣದಿಂದಾಗಿ ಸಿಲುಕಿ ಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ದೇಶಕ್ಕೆ ಕರೆತರಲು ಭಾರತವು ವಿಶೇಷ ವಿಮಾನವನ್ನು ಕಳುಹಿಸಿಕೊಟ್ಟಿದೆ.
ಢಾಕಾದಿಂದ ನೇರವಾಗಿ ವಿಮಾನವು ಶ್ರೀನಗರಕ್ಕೆ ಬಂದು ಇಳಿಯಲಿದೆ. ಬಾಂಗ್ಲಾದೇಶದಿಂದ ಭಾರತೀಯರನ್ನು ಕರೆತರುವ ಮೂರನೇ ವಿಮಾನ ಇದಾಗಿದೆ.
ಮೊದಲ ವಿಮಾನವು ಸೋಮವಾರ 107 ಭಾರತೀಯರನ್ನು ಹೊತ್ತ ಢಾಕಾದಿಂದ 107 ಭಾರತೀಯರನ್ನು ಮುಂಬೈಗೆ ಕರೆತಂದಿತ್ತು. ಎರಡನೇ ವಿಮಾನವು 129 ಭಾರತೀಯರನ್ನು ಹೊತ್ತು ಢಾಕಾದಿಂದ ನವದೆಹಲಿಗೆ ಶನಿವಾರ ಬಂದಿಳಿದಿತ್ತು.
ಕೇಂದ್ರ ಸರ್ಕಾರ ಆರಂಭಿಸಿರುವ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮೇ 7ರಿಂದ ವಿದೇಶದಲ್ಲಿ ಸಿಲುಕಿ ಹಾಕಿಕೊಂಡಿರುವ ಸುಮಾರು 6000 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ.
ಮಿಷನ್ ಅಡಿಯಲ್ಲಿ ಹಂತಹಂತವಾಗಿ ಭಾರತೀಯರನ್ನು ಕರೆತರಲಾಗುತ್ತಿದೆ. ಮೊದಲ ಹಂತ ಮೇ 7 ರಿಂದ ಪ್ರಾರಂಭವಾಗಿದೆ. ಏರ್ ಇಂಡಿಯಾವು 64 ವಿಶೇಷ ವಿಮಾನಗಳ ಮೂಲಕ ವಿದೇಶದಲ್ಲಿ ಸಿಲುಕಿರುವ ಸುಮಾರು 15,000 ಭಾರತೀಯರನ್ನು ವಾಪಾಸ್ ಕರೆ ತರಲಿದೆ ಎಂದು ಸರಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.