ಮುಂಬೈ: ಕಳೆದ ತಿಂಗಳು ಪಾಲ್ಘರ್ನಲ್ಲಿ ಮೂವರು ಸಾಧುಗಳನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಕನಿಷ್ಠ 24 ಆರೋಪಿಗಳನ್ನು ಮಹಾರಾಷ್ಟ್ರ ಸಿಐಡಿ ಮಂಗಳವಾರ ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಬಂಧಿಸಲ್ಪಟ್ಟ ಪ್ರಕರಣಗಳ ಸಂಖ್ಯೆ 133ಕ್ಕೆ ಏರಿದೆ.
ಪೊಲೀಸರ ಪ್ರಕಾರ, 133 ಜನರಲ್ಲಿ ಒಂಬತ್ತು ಅಪ್ರಾಪ್ತ ವಯಸ್ಕರನ್ನು ಸಹ ಬಂಧಿಸಲಾಗಿದೆ.
ಈಗಾಗಲೇ ಪಾಲ್ಘರ್ ಎಸ್ಪಿಯನ್ನು ರಜೆ ಮೇಲೆ ಕಳುಹಿಸಲಾಗಿದ್ದು, ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಮತ್ತು 35 ಮಂದಿಯನ್ನು ಘಟನೆಯ ಬಗ್ಗೆ ತಮ್ಮ ಕರ್ತವ್ಯವನ್ನು ನಡೆಸದ ಕಾರಣಕ್ಕಾಗಿ ವರ್ಗಾಯಿಸಲಾಗಿದೆ.
ಮೇ 1 ರಂದು ಪಾಲ್ಘರ್ನಲ್ಲಿ ಸಾಧುಗಳನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರ ಅಪರಾಧ ತನಿಖಾ ಇಲಾಖೆ (ಸಿಐಡಿ) ಐದು ಜನರನ್ನು ಬಂಧಿಸಿತ್ತು. ಒಂದು ದಿನದ ನಂತರ, ವಾಡಾ ಪೊಲೀಸ್ ಠಾಣೆಯಲ್ಲಿ ಇರಿಸಲಾದ ಒಬ್ಬ ಆರೋಪಿಯು ಕೊರೋನಾವೈರಸ್ COVID-19 ಸೋಂಕಿಗೆ ತುತ್ತಾಗಿದ್ದಾನೆ ಎಂಬುದು ಬಳಿಕ ತಿಳಿದು ಬಂತು. ಆರೋಪಿಗಳನ್ನು ಮೊದಲು ಪಾಲ್ಘರ್ ಗ್ರಾಮೀಣ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿ ದಾಖಲಿಸಲಾಯಿತು ಮತ್ತು ನಂತರ ಅವರನ್ನು ಜೆಜೆ ಆಸ್ಪತ್ರೆಯ ಖೈದಿಗಳ ವಾರ್ಡ್ಗೆ ಸ್ಥಳಾಂತರಿಸಲಾಯಿತು.
ದೃಢೀಕೃತ ವಲ್ಲದ ಮಾಹಿತಿಯ ಪ್ರಕಾರ ಸುಮಾರು 20-30 ಆರೋಪಿಗಳನ್ನು ಜೈಲಿನಲ್ಲಿ ಒಂದೇ ಸೆಲ್ನಲ್ಲಿ ದಾಖಲಿಸಿದ್ದರಿಂದ ಆರೋಪಿಗಳು ಸೋಂಕಿಗೆ ಒಳಗಾಗಿದ್ದಾರೆಂದು ನಂಬಲಾಗಿದೆ.
ಏಪ್ರಿಲ್ 16 ರಂದು ಇಬ್ಬರು ಸನ್ಯಾಸಿಗಳು ಮುಂಬೈನಿಂದ ಸೂರತ್ ಕಡೆಗೆ ಕಾರಿನಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು. ಗ್ಯಾಡ್ಚಿಂಚಲ್ ಗ್ರಾಮದಲ್ಲಿ, ಗ್ರಾಮಸ್ಥರ ಗುಂಪೊಂದು ಅವರನ್ನು ತಡೆದು ಕಳ್ಳರು ಎಂಬ ಅನುಮಾನದ ಮೇಲೆ ಅವರನ್ನು ಹೊಡೆದು ಸಾಯಿಸಿತು, ಕೆಲವು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದರೂ ಕೂಡ ಸಾಧುಗಳನ್ನು ಮತ್ತು ಚಾಲಕನ ಹತ್ಯೆ ಮಾಡಲಾಯಿತು. ಕೆಲವು ಆರೋಪಿಗಳು ನಂತರ ಗ್ರಾಮದ ಸುತ್ತಲಿನ ದಟ್ಟ ಕಾಡಿಗೆ ಓಡಿಹೋಗಿದ್ದರು, ಅಧಿಕಾರಿಯೊಬ್ಬರ ಪ್ರಕಾರ, ಪೊಲೀಸರು ಡ್ರೋನ್ಗಳನ್ನು ಬಳಸಿ ಅವರನ್ನು ಪತ್ತೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.