ನವದೆಹಲಿ: ಆಹಾರ ಸಚಿವಾಲಯವು ಆಧಾರ್ ಅನ್ನು ಪಡಿತರ ಚೀಟಿಗಳೊಂದಿಗೆ ಜೋಡಿಸಲು ನೀಡಿದ್ದ ಗಡುವನ್ನು ಸೆಪ್ಟೆಂಬರ್ವರೆಗೆ ವಿಸ್ತರಿಸಿದೆ.
ಪಡಿತರ ಚೀಟಿಗಳೊಂದಿಗೆ ಆಧಾರ್ ಲಿಂಕ್ ಮಾಡುವ ಗಡುವನ್ನು ಸೆಪ್ಟೆಂಬರ್ವರೆಗೆ ವಿಸ್ತರಿಸಲಾಗಿದೆ ಎಂದು ಆಹಾರ ಸಚಿವಾಲಯ ಸೋಮವಾರ ತಿಳಿಸಿದೆ ಮತ್ತು ಎಲ್ಲಾ ಫಲಾನುಭವಿಗಳು ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಹೊಂದಿರದಿದ್ದರೂ ಸಹ ತಮ್ಮ ಆಹಾರ ಧಾನ್ಯಗಳನ್ನು ಪಡೆಯುವುದನ್ನು ಮುಂದುವರೆಸಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ.
ಆಧಾರ್ ಸಂಖ್ಯೆಯನ್ನು ನೀಡದವರ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುವುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಸಚಿವಾಲಯ ಈ ಸ್ಪಷ್ಟೀಕರಣವನ್ನು ನೀಡಿದೆ.
“ಎಲ್ಲಾ ಪಡಿತರ ಚೀಟಿಗಳು / ಫಲಾನುಭವಿಗಳೊಂದಿಗೆ ಆಧಾರ್ ಸಂಖ್ಯೆಗಳ ಜೋಡಣೆ ಪೂರ್ಣಗೊಳಿಸಲು ಫೆಬ್ರವರಿ 7, 2017 ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಆಧಾರ್ ಅಧಿಸೂಚನೆಯಡಿಯಲ್ಲಿ (ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ) ಎಲ್ಲಾ ರಾಜ್ಯಗಳು / ಯುಟಿಗಳಿಗೆ ನೀಡಲಾದ ಟೈಮ್ಲೈನ್ ಅನ್ನು ಇಲಾಖೆಯ ವತಿಯಿಂದ ಸೆಪ್ಟೆಂಬರ್ 30, 2020 ರವರೆಗೆ ವಿಸ್ತರಿಸಲಾಗಿದೆ “ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಅಲ್ಲಿಯವರೆಗೆ, ಯಾವುದೇ ನಿಜವಾದ ಫಲಾನುಭವಿ ಅಥವಾ ಮನೆಯವರಿಗೆ ಆಹಾರ ಧಾನ್ಯಗಳು ನೀಡುವುದಕ್ಕೆ ನಿರಾಕರಿಸಬಾರದು ಎಂದು ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿ) ಸ್ಪಷ್ಟ ಸೂಚನೆಗಳನ್ನು ನೀಡಿದೆ ಎಂದು ಅದು ಹೇಳಿದೆ.
“ಆಧಾರ್ ಸಂಖ್ಯೆಯನ್ನು ಹೊಂದಿರದ ಕಾರಣ ಅವರ ಹೆಸರು / ಪಡಿತರ ಚೀಟಿಗಳನ್ನು ಅಳಿಸಬಾರದು / ರದ್ದು ಮಾಡಬಾರದು” ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.