ಬೆಂಗಳೂರು: ಲಾಕ್ಡೌನ್ ಸಂಕಷ್ಟದಿಂದ ರಾಜ್ಯದ ಆರ್ಥಿಕತೆಯನ್ನು ಮೇಲೆತ್ತುವ ಉದ್ದೇಶದಿಂದ 1961 ರ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ.
ಈ ತಿದ್ದುಪಡಿಯ ಪ್ರಕಾರ, ಕೈಗಾರಿಕೆ, ಉದ್ಯಮಗಳು ಸರಕಾರದ ಯಾವುದೇ ಹಸ್ತಕ್ಷೇಪ ಇಲ್ಲದೆಯೇ ರೈತರಿಂದ ಭೂಮಿಯನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಈ ಒಪ್ಪಂದಕ್ಕೆ ಮೂವತ್ತು ದಿನಗಳಲ್ಲಿ ಯಾವುದೇ ವಿರೋಧಗಳು ಸೃಷ್ಟಿಯಾಗದೇ ಇದ್ದ ಪಕ್ಷದಲ್ಲಿ, ಅಥವಾ ಯಾರೂ ವಿರೋಧ ವ್ಯಕ್ತಪಡಿಸದಿದ್ದಲ್ಲಿ, ಭೂ ಒಪ್ಪಂದಕ್ಕೆ ಸ್ವಯಂ ಅನುಮೋದನೆ ದೊರೆಯುತ್ತದೆ.
ಈ ಹಿಂದೆ ಭೂ ಖರೀದಿಯ ವಿಚಾರದಲ್ಲಿ ಮೂರು ವರ್ಷಗಳ ಸುಧೀರ್ಘ ಪ್ರಕ್ರಿಯೆಯನ್ನು ಅನುಸರಿಸಬೇಕಾಗಿತ್ತು. ಆದರೆ ಇನ್ನು ಮುಂದೆ ಕೇವಲ 30 ದಿನಗಳಲ್ಲಿಯೇ ಭೂ ಖರೀದಿ ವ್ಯವಹಾರ ಮುಕ್ತಾಯವಾಗುತ್ತದೆ ಎಂದು FKCCI ಅಧ್ಯಕ್ಷ ಸಿ ಆರ್ ಜನಾರ್ಧನ್ ಅವರು ತಿಳಿಸಿದ್ದಾರೆ. ಅಲ್ಲದೆ ಈ ಹಿಂದೆ ಕೇವಲ ಸರ್ಕಾರಿ ಸಂಸ್ಥೆಗಳಿಂದ ಮಾತ್ರವೇ ಭೂ ಖರೀದಿ ವ್ಯವಹಾರಕ್ಕೆ ಅವಕಾಶವಿತ್ತು. ಇದೀಗ ಈ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಮಹತ್ವದ ಬದಲಾವಣೆಯನ್ನು ಸರ್ಕಾರ ತಂದಿದೆ.
ಈ ತಿದ್ದುಪಡಿಯನ್ನು ಕಳೆದ ತಿಂಗಳಷ್ಟೇ ರಾಜ್ಯ ಸರ್ಕಾರ ಅಂಗೀಕರಿಸಿತ್ತು. ಸದ್ಯ ರಾಜ್ಯಪಾಲ ವಜುಭಾಯ್ ವಾಲಾ ಅವರು 2020 ರ ಈ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಸಹಿ ಹಾಕಿದ್ದು, ನಂತರವಷ್ಟೇ ಈ ಮಹತ್ವದ ನಿರ್ಣಯದ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.