ನವದೆಹಲಿ: ಕೊರೋನಾ ವೈರಸ್ ಸೋಂಕಿಗೆ ಮೊದಲ ಪ್ರತಿಕಾಯ ಕಿಟ್ ಅನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಅಭಿವೃದ್ಧಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಕೋವಿಡ್-19 ಗಾಗಿ ಪ್ರತಿಕಾಯ ಪತ್ತೆಗಾಗಿ “COVID KAVACH ELISA” ವನ್ನು ಪುಣೆಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) -ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಅಭಿವೃದ್ಧಿಪಡಿಸಿದೆ ಮತ್ತು ಅಧಿಕೃತಗೊಳಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಟೆಸ್ಟಿಂಗ್ ಕಿಟ್ಗಳನ್ನು ಬಳಕೆ ಮಾಡುವ ಮೂಲಕ ಒಂದೇ ಬಾರಿಗೆ ಸುಮಾರು 90 ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಆ ಮೂಲಕ ಹೆಚ್ಚು ತ್ವರಿತವಾಗಿ ಕಾರ್ಯ ನಿರ್ವಹಿಸಲಿದೆ ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಈ ಕಿಟ್ಗಳ ಬಗ್ಗೆ ಮುಂಬೈನ ಎರಡು ಸಂಸ್ಥೆಗಳಲ್ಲಿ ಮೌಲ್ಯೀಕರಿಸಲಾಗಿದ್ದು, ಇದರ ನಿಖರತೆ ಮತ್ತು ಹೆಚ್ಚಿನ ಸಂವೇದನೆಯನ್ನು ಪರೀಕ್ಷೆ ಮಾಡಲಾಗಿದೆ ಎಂದು ಹರ್ಷವರ್ಧನ್ ಅವರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
#ELISA based testing is easily possible even at district level. The @icmr_niv technology has been transferred to #Zydus #Cadila for mass-scale production.
The Drug Controller General has granted commercial production & marketing permission to Zydus. #COVID19Updates #SARS_CoV_2 pic.twitter.com/jFaAAerWtl— Dr Harsh Vardhan (@drharshvardhan) May 10, 2020
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ವೈರಾಲಜಿ ಸಂಸ್ಥೆ ಈ ತಂತ್ರಜ್ಞಾನವನ್ನು ಹೆಚ್ಚು ಉತ್ಪಾದನೆಗೆ ಒಳಪಡಿಸಲು ವೈಡಸ್ ಕ್ಯಾಡಿಲಾ ಜೊತೆಗೆ ಕೈ ಜೋಡಿಸಲಾಗಿದೆ. ಇದು ಹೊಸ ತಂತ್ರಜ್ಞಾನಗಳನ್ನು ಬಳಕೆ ಮಾಡುವ ಜಾಗತಿಕ ಮಟ್ಟದ ಆರೋಗ್ಯ ಕಂಪನಿಯಾಗಿದ್ದು, ಇದರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಉತ್ಪಾದನೆ ಮಾಡಲಾಗುವುದಾಗಿಯೂ ತಿಳಿಸಿದೆ.
ವಿಶ್ವದ ಎಲ್ಲಾ ದೇಶಗಳೂ ಕೋವಿಡ್ ವಿರುದ್ಧ ಹೋರಾಟಕ್ಕೆ ಪರಿಣಾಮಕಾರಿ ತಂತ್ರಜ್ಞಾನ, ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿವೆ. ಪುಣೆಯ ವೈರಾಲಜಿ ಸಂಸ್ಥೆಯೂ ಈ ನಿಟ್ಟಿನಲ್ಲಿ ದಣಿವರಿಯದೆ ಕಾರ್ಯ ನಿರ್ವಹಣೆ ಮಾಡುತ್ತಲೆ ಬಂದಿದೆ. ಇದು ಮೇಕ್ ಇನ್ ಇಂಡಿಯಾಗೆ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ.
ಈಗಾಗಲೇ ಕೊರೋನಾ ನಿಯಂತ್ರಣ ವಿಚಾರದಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಕಿಟ್ಗಳು ದೋಷಪೂರಿತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅವುಗಳನ್ನು ಮತ್ತೆ ಚೀನಾಕ್ಕೆ ಹಿಂದಕ್ಕೆ ಕಳುಹಿಸಿತ್ತು. ಇದೀಗ ಭಾರತೀಯ ವಿಜ್ಞಾನಿಗಳೇ ಹೊಸ ಕಿಟ್ ಒಂದನ್ನು ಅಭಿವೃದ್ಧಿ ಮಾಡಿದ್ದು ಇದು ಕೊರೋನಾ ವಿರುದ್ಧ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಆರೋಗ್ಯ ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.