ನವದೆಹಲಿ: COVID-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದ ಐದು ದ್ವೀಪ ರಾಷ್ಟ್ರಗಳಾದ ಮಾಲ್ಡೀವ್ಸ್, ಮಾರಿಷಸ್, ಮಡಗಾಸ್ಕರ್, ಕೊಮೊರೊಸ್ ಮತ್ತು ಸೀಶೆಲ್ಸ್ಗಳಿಗೆ ವೈದ್ಯಕೀಯ ನೆರವನ್ನು ಕಳುಹಿಸಲು ಭಾರತವು ಮಿಷನ್ ಸಾಗರ್ ಅನ್ನು ಆರಂಭಿಸಿದೆ.
ನೆರವು ನೀಡಲು ಸರ್ಕಾರ ಕೈಗೊಂಡ ಉಪಕ್ರಮದ ಭಾಗವಾಗಿ ಭಾರತ ಭಾನುವಾರ ಮಿಷನ್ ಸಾಗರ್ ಅನ್ನು ಪ್ರಾರಂಭಿಸಿದೆ.
ರಕ್ಷಣಾ ಸಚಿವಾಲಯವು ತನ್ನ ಹೇಳಿಕೆಯಲ್ಲಿ, “ಭಾರತೀಯ ನೌಕಾ ಹಡಗು ಕೇಸರಿಯು ಮಾಲ್ಡೀವ್ಸ್, ಮಾರಿಷಸ್, ಸೀಶೆಲ್ಸ್, ಮಡಗಾಸ್ಕರ್ ಮತ್ತು ಕೊಮೊರೊಸ್ಗೆ ಹೊರಟಿದೆ, ಆಹಾರ ಪದಾರ್ಥಗಳು, ಎಚ್ಸಿಕ್ಯು ಟ್ಯಾಬ್ಲೆಟ್ಗಳು ಸೇರಿದಂತೆ ಕೋವಿಡ್ ಸಂಬಂಧಿತ ಔಷಧಿಗಳು ಮತ್ತು ವೈದ್ಯಕೀಯ ಸಹಾಯ ತಂಡಗಳೊಂದಿಗೆ ವಿಶೇಷ ಆಯುರ್ವೇದ ಔಷಧಿಗಳನ್ನು ಇದು ಹೊತ್ತೊಯ್ದಿದೆ” ಎಂದಿದೆ.
ಅಲ್ಲದೆ, ಮಿಷನ್ ಸಾಗರ್ನ ಭಾಗವಾಗಿ, ಭಾರತೀಯ ನೌಕಾ ಹಡಗು ಕೇಸರಿ ಮಾಲ್ಡೀವ್ಸ್ ಗಣರಾಜ್ಯದ ಮಾಲೆ ಬಂದರಿಗೆ ಪ್ರವೇಶಿಸಿ, ಅವರಿಗೆ 600 ಟನ್ ಆಹಾರ ಸರಬರಾಜು ಒದಗಿಸಲಿದೆ. ಭಾರತ ಮತ್ತು ಮಾಲ್ಡೀವ್ಸ್ ನಿಕಟ ಕಡಲ ನೆರೆಹೊರೆಯವರಾಗಿದ್ದು, ಬಲವಾದ ಮತ್ತು ಅತ್ಯಂತ ಸೌಹಾರ್ದಯುತ ರಕ್ಷಣಾ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿವೆ.
ಎಚ್ಸಿಕ್ಯು ಟ್ಯಾಬ್ಲೆಟ್ಗಳು ಸೇರಿದಂತೆ COVID-19 ಸಂಬಂಧಿತ ಅಗತ್ಯ ಔಷಧಿಗಳನ್ನು ಈಗಾಗಲೇ ಮಾರಿಷಸ್, ಮಾಲ್ಡೀವ್ಸ್ ಮತ್ತು ಸೀಶೆಲ್ಸ್ಗಳಿಗೆ ಕಳುಹಿಸಲಾಗಿತ್ತು. ಈ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಅವರ ಸನ್ನದ್ಧತೆಯನ್ನು ಹೆಚ್ಚಿಸಲು ಆಯ್ದ ವೈದ್ಯಕೀಯ ಸಿಬ್ಬಂದಿಯ ತಂಡವನ್ನು ಮಾಲ್ಡೀವ್ಸ್ಗೆ ಮೊದಲೇ ಕಳುಹಿಸಲಾಗಿತ್ತು.
ಸಾಗರ್ ತನ್ನ ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧಗಳಿಗೆ ಭಾರತ ನೀಡಿದ ಮಹತ್ವವನ್ನು ಎತ್ತಿ ತೋರಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ.
ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು ಮತ್ತು ಭಾರತ ಸರ್ಕಾರದ ಇತರ ಏಜೆನ್ಸಿಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.