ನವದೆಹಲಿ: ಕೊರೋನಾ ಲಾಕ್ಡೌನ್ನಿಂದಾಗಿ ಸ್ಥಗಿತಗೊಳಿಸಲಾಗಿದ್ದ ರೈಲು ಸೇವೆಯನ್ನು ನಾಳೆಯಿಂದಲೇ ಮತ್ತೆ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಮೇ 12 ರಿಂದ ದೆಹಲಿಯಿಂದ ದೇಶದ 15 ಕಡೆಗೆ ವಿಶೇಷ ರೈಲು ಸೇವೆಯನ್ನು ಆರಂಭ ಮಾಡುವುದಾಗಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಆ ಮೂಲಕ ಸಂತ್ರಸ್ತ ಜನರಿಗೆ ಸಿಹಿಸುದ್ದಿ ನೀಡಲು ಮುಂದಾಗಿದೆ.
ಬೆಂಗಳೂರು, ಮುಂಬೈ, ಅಹಮದಾಬಾದ್, ಕೊಚ್ಚಿ, ಭುವನೇಶ್ವರ್, ಚೆನ್ನೈ, ಮುಂಬೈ ಸೇರಿದಂತೆ ಒಟ್ಟು ದೇಶದ 15 ಪ್ರದೇಶಗಳಿಗೆ ಈ ಅನುಕೂಲವನ್ನು ಕಲ್ಪಿಸಲು ಮುಂದಾಗಿದೆ. ಆನ್ಲೈನ್ ಮೂಲಕ ಮಾತ್ರವೇ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದೂ ಈ ಕುರಿತಂತೆ ಕೇಂದ್ರ ಸ್ಪಷ್ಟನೆಯನ್ನೂ ನೀಡಿದೆ. ಇನ್ನು ಇಂದು ಸಂಜೆ (ಮೇ 11) ರ 4 ಗಂಟೆಯಿಂದ ತೊಡಗಿದಂತೆ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ನೀಡಲಾಗಿದೆ. ಇಂಡಿಯನ್ ರೈಲ್ವೆ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್ಸಿಟಿಸಿ) ವೆಬ್ಸೈಟ್ನಲ್ಲಿ ಅಥವಾ ಅದರ ಮೊಬೈಲ್ ಅಪ್ಲಿಕೇಶನ್ ಮೂಲಕ ಮಾತ್ರ ಲಭ್ಯವಿರುತ್ತದೆ.
ಇನ್ನು ಪ್ರಯಾಣದ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕವೇ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ಪ್ರಯಾಣಿಕರು ಇಳಿದ ನಂತರ ಅವರಿಗೆ ಸ್ಕ್ರೀನಿಂಗ್ ಮಾಡಲಾಗುವುದಾಗಿಯೂ ತಿಳಿಸಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮೊದಲಾದ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವಂತೆಯೂ ರೈಲ್ವೆ ಇಲಾಖೆ ಸೂಚನೆ ನೀಡಿದೆ.
15 ವಿಶೇಷ ರೈಲುಗಳ ಪಟ್ಟಿ ಇಂತಿದೆ:
1. ನವದೆಹಲಿಯಿಂದ ದಿಬ್ರುಘರ್
2. ನವದೆಹಲಿಯಿಂದ ಅಗರ್ತಲಾ
3. ನವದೆಹಲಿಯಿಂದ ಹೌರಾ
4. ನವದೆಹಲಿಯಿಂದ ಪಾಟ್ನಾ
5. ನವದೆಹಲಿಯಿಂದ ಬಿಲಾಸ್ಪುರ
6. ನವದೆಹಲಿಯಿಂದ ರಾಂಚಿ
7. ನವದೆಹಲಿಯಿಂದ ಭುವನೇಶ್ವರ
8. ನವದೆಹಲಿಯಿಂದ ಸಿಕಂದರಾಬಾದ್
9. ನವದೆಹಲಿಯಿಂದ ಬೆಂಗಳೂರು
10. ನವದೆಹಲಿಯಿಂದ ಚೆನ್ನೈ
11. ನವದೆಹಲಿಯಿಂದ ತಿರುವನಂತಪುರಂ
12. ನವದೆಹಲಿಯಿಂದ ಮಡ್ಗಾಂವ್
13. ನವದೆಹಲಿಯಿಂದ ಮುಂಬೈ ಸೆಂಟ್ರಲ್
14. ನವದೆಹಲಿಯಿಂದ ಅಹಮದಾಬಾದ್
15. ನವದೆಹಲಿಯಿಂದ ಜಮ್ಮು ತಾವಿ
ಮೊದಲಾದೆಡೆಗೆ ಈ ರೈಲುಗಳು ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಅಲ್ಲದೆ ವಲಸೆ ಕಾರ್ಮಿಕರ ಶ್ರಮಿಕ್ ರೈಲು ಸೇವೆಯೂ ಮುಂದುವರಿಯಲಿರುವುದಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.