ಬೆಂಗಳೂರು: ಕೋವಿಡ್ -19 ವಿರುದ್ಧ ಹೋರಾಟಕ್ಕೆ ಬಿಬಿಎಂಪಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಪ್ರಾಣವಾಯು ಎಂಬ ಹೊಸ ಉಪಕ್ರಮವನ್ನು ಬಳಸಲು ಮುಂದಾಗಿದ್ದಾರೆ.
ಆಕ್ಸಿಮೀಟರ್ನಿಂದ ರೋಗಿಗಳ ತಪಾಸಣೆ ನಡೆಸಿ Influence like illness (ILI) ಮತ್ತು ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿರುವವರಿಗೆ ಸಹಾಯವಾಗುವಂತೆ ‘ಪ್ರಾಣವಾಯು’ ವನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿಯಂತೆ ರೋಗಿಗಳ ಅನಾರೋಗ್ಯದ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಈ ಕ್ರಮವನ್ನು ಉಪಯೋಗಿಸಲಾಗುವುದು ಎಂದಿದ್ದಾರೆ.
ಅಲ್ಲದೆ ಇದು ಕೊಮೊರ್ಬಿಡಿಟಿ ಹೊಂದಿರುವ ಜನರಿಗೆ ಮತ್ತು ತೀವ್ರ ಉಸಿರಾಟದ ತೊಂದರೆಗೆ ಸಿಲುಕಿರುವ ಜನರಿಗೆ ತಮ್ಮ ಆರೋಗ್ಯ ಮಾಹಿತಿಯನ್ನು ತಾವಾಗಿಯೇ ಪಡೆದುಕೊಳ್ಳುವುದಕ್ಕೂ ಸಹಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಜೊತೆಗೆ ರಕ್ತದ ಪರಿಶುದ್ಧತೆ, ಹೃದಯ ಬಡಿತದ ಮೇಲೆಯೂ ಇದು ಗಮನ ಹರಿಸುತ್ತದೆ. ಅದರಂತೆಯೇ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳನ್ನೂ ಆರಂಭದಲ್ಲಿಯೇ ಪತ್ತೆ ಹಚ್ಚುವಲ್ಲಿಯೂ ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಪಾಲಿಕೆ ವತಿಯಿಂದ ಪ್ರಾಣವಾಯು ಯೋಜನೆಗೆ ಇಂದು ಚಾಲನೆ ನೀಡಲಾಯಿತು. ಈ ಯೋಜನೆಯಡಿ ಒದಗಿಸಲಾದ ಪಲ್ಸ್ ಆಕ್ಸಿಮೀಟರ್ ಬಳಸಿ, ರೋಗಿಗಳ ಮೇಲೆ ನಿಗಾವಣೆಯ ಉಪಕ್ರಮವಹಿಸಲಾಗುತ್ತದೆ. #ಮನೆಯಲ್ಲೇಇರಿ #BBMP #Bengaluru #COVID19 #KarnatakaFightsCorona pic.twitter.com/9Tu3ZF6Xma
— B.H.Anil Kumar,IAS (@BBMPCOMM) May 8, 2020
ಇನ್ನು ಕೊರೋನಾ ಜೊತೆಗೆ ಈತರ ರೋಗ ಲಕ್ಷಣಗಳ ವಿಚಾರದಲ್ಲಿಯೂ ಪ್ರಾಣವಾಯು ಪರಿಣಾಮಕಾರಿಯಾಗಿ ಕೆಲಸ ಮಾಡುವುದಾಗಿಯೂ ತಿಳಿಸಿದ್ದು, ಇದು ರೋಗಿಗಳು ವೆಂಟಿಲೇಟರ್ಗಳಿಂದ ಮುಕ್ತಿ ಹೊಂದುವುದಕ್ಕೆ ಮತ್ತು ಆಸ್ಪತ್ರೆಯ ವಾಸ ಕಡಿಮೆಗೊಳಿಸುವ ನಿಟ್ಟಿನಲ್ಲಿಯೂ ಸಹಾಯ ಮಾಡುತ್ತದೆ ಎಂಬುದಾಗಿಯೂ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.