ನವದೆಹಲಿ: ಮೇ 3 ರಂದು ಜಮ್ಮು-ಕಾಶ್ಮೀರದ ಹಂಡ್ವಾರಾದಲ್ಲಿ ನಡೆದ ಘಟನೆ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ 22 ವರ್ಷದ ಕಾನೂನು ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಬಜರಂಗದಳದ ಸದಸ್ಯರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಗುರುವಾರ ಪ್ರಕರಣ ದಾಖಲಿಸಲಾಗಿದೆ. ಬುಲಂದ್ಸರದ ಖುರ್ಜಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಅನ್ನು ರಿಜಿಸ್ಟರ್ ಮಾಡಲಾಗಿದೆ.
ಎಫ್ಐಆರ್ ಪ್ರಕಾರ, ವಿದ್ಯಾರ್ಥಿ ಮಹೂರ್ ಪರ್ವೇಜ್ ಕಳೆದ ಭಾನುವಾರ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹುತಾತ್ಮರನ್ನು ಅಪರಾಧಿಗಳು ಎಂಬಂತೆ ಬಿಂಬಿಸಿದ್ದಾಳೆ.
“ನಮ್ಮ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸುತ್ತಿರುವಾಗ, ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಕೆಲವು ಅಂಶಗಳು ಅವರ ತ್ಯಾಗವನ್ನು ಕೆಡಿಸುತ್ತಿವೆ. ನಾವು ಅಂತಹ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ ಮತ್ತು ಆಕೆಯನ್ನು ಬಂಧಿಸದಿದ್ದರೆ ಬೀದಿಗಿಳಿಯುತ್ತೇವೆ”ಎಂದು ವಕೀಲ ಪ್ರವೀಣ್ ಭತಿ, ಬಜರಂಗದಳದ ಬುಲಂದ್ಶಹರ್ ಘಟಕದ ಸೆಹ್ ಸನ್ಯೋಜಾಕ್ ಹೇಳಿದ್ದಾರೆ.
ಜಾಮೀನು ರಹಿತ ಐಪಿಸಿ ಸೆಕ್ಷನ್ 505-ಬಿ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ ಮಹೂರ್ ಪರ್ವೇಜ್ ತನ್ನ ಇನ್ಸ್ಟಾಗ್ರಾಮ್ ಕಥೆಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರನ್ನು ಭಾನುವಾರ ‘ಯುದ್ಧ ಅಪರಾಧಿಗಳು’ ಎಂದು ಉಲ್ಲೇಖಿಸಿದ್ದಾಳೆ.
“ನೀವೆಲ್ಲರೂ ಯುದ್ಧ ಅಪರಾಧಿಗಳನ್ನು ವೈಭವೀಕರಿಸುವ ಗೀಳನ್ನು ಏಕೆ ಹೊಂದಿದ್ದೀರಿ? ಈ ಪಡೆಗಳು 70+ ವರ್ಷಗಳಿಂದ ಕಾಶ್ಮೀರದಲ್ಲಿ ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿವೆ ಮತ್ತು ಸಂಪೂರ್ಣ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡಿವೆ. ಇನ್ನೂ ಕಾಶ್ಮೀರವನ್ನು ಮುಕ್ತಗೊಳಿಸಲು ಬಂದೂಕು ಎತ್ತಿದವನು ನಿಮಗೆ ಭಯೋತ್ಪಾದಕ ಮತ್ತು ಇವರು ಹುತಾತ್ಮರೇ? ಅದನ್ನು ಅರ್ಥಮಾಡಿಕೊಳ್ಳಿ” ಎಂದು ಹೇಳಿದ್ದಾಳೆ.
ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಹಂಡ್ವಾರಾದಲ್ಲಿ ನಡೆದ ಭಯೋತ್ಪಾದಕ ಎನ್ಕೌಂಟರ್ನಲ್ಲಿ ಐವರು ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರಿಂದ ಪಾಕಿಸ್ಥಾನಿಗಳು ಸಂಭ್ರಮಾಚರಿಸಿದ್ದಾರೆ. ಇದು ಅಭಿನಂದನ್ ವರ್ತಮಾನ್ ಪ್ರಸಂಗದ ಪುನರಾವರ್ತನೆ ಎಂದು ಹೇಳುವ ಮೂಲಕ ಇಸ್ಲಾಮಿಸ್ಟ್ಗಳು ಹಂಡ್ವಾರ ಘಟನೆಯನ್ನು ಅಪಹಾಸ್ಯ ಮಾಡಿದ್ದಾರೆ.
ಆದರೆ ಈ ಘಟನೆಗೆ ಭಾರತೀಯ ಸೇನೆಯು ತಕ್ಕ ಪ್ರತಿಕಾರವನ್ನು ತೀರಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.