ಮಂಗಳೂರು: ದೇಶದಾದ್ಯಂತ ಕೊರೋನಾ ವೈರಸ್ ಜನರ ಆಹಾರವನ್ನು ಕಸಿದುಕೊಳ್ಳುವ ಕೆಲಸವನ್ನು ಮಾಡಿದೆ. ಕೆಲಸವಿಲ್ಲದೆ, ಹಣವೂ ಇಲ್ಲದೆ ಬಡ ಜನರು ಕೊರಗುತ್ತಿರುವ ಈ ಸಂದರ್ಭದಲ್ಲಿ ಮಂಗಳೂರಿನ ಬಡ ವರ್ಗದ ಹೊಟ್ಟೆ ತುಂಬಿಸುವ ಕೆಲಸವನ್ನು ಅಕ್ಷಯ ಪಾತ್ರ ಫೌಂಡೇಶನ್ ಮಾಡುತ್ತಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಡ ವರ್ಗದ ಜನರಿಗೆ ಇನ್ಫೋಸಿಸ್, ವಿಶ್ವ ಕೊಂಕಣಿ ಕೇಂದ್ರ, ಮೆಸ್ಕಾಂ ಸೇರಿದಂತೆ ಇನ್ನಿತರ ಹಲವು ದಾನಿಗಳ ನೆರವಿನಿಂದ ಆಹಾರ ಕಿಟ್ಗಳನ್ನು ಒದಗಿಸುವ ಕೆಲಸವನ್ನು ಈ ಫೌಂಡೇಶನ್ ಮಾಡಿದೆ. ಈ ವರೆಗೆ 2 ಲಕ್ಷಕ್ಕೂ ಅಧಿಕ ಆಹಿರ ತಯಾರಿಕೆ ಮಾಡಬಹುದಾದಷ್ಟು 5141 ಆಹಾರ ಕಿಟ್ಗಳನ್ನು ಒದಗಿಸುವ ಮಹತ್ಕಾರ್ಯವನ್ನು ಈ ಫೌಂಡೇಶನ್ ಮಾಡಿದೆ. ಇನ್ನು ಉಡುಪಿಗೆ ಸಂಬಂಧಿಸಿದಂತೆ 500 ಆಹಾರ ಕಿಟ್ಗಳನ್ನು ಒದಗಿಸುವ ಕೆಲಸವನ್ನು ಅಕ್ಷಯಪಾತ್ರೆ ಮಾಡಿದೆ.
ಇನ್ನು ದೇಶಾದ್ಯಂತ ಈ ಫೌಂಡೇಶನ್ ತನ್ನ ಸೇವೆಯನ್ನು ನೀಡುತ್ತಿದ್ದು, ವಲಸಿಗರು, ನಿರಾಶ್ರಿತರು, ಬಡವರ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಈ ವರೆಗೆ 3 ಕೋಟಿಗೂ ಅಧಿಕ ಆಹಾರವನ್ನು ದೇಶದ ಮೂಲೆಮೂಲೆಗೂ ತಲುಪಿಸಿರುವ ಹಿರಿಮೆ ಈ ಫೌಂಡೇಶನ್ಗೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೆರವಾಗುವ ಈ ಸಂಸ್ಥೆಗೆ ಅನೇಕ ಕಾರ್ಪೊರೇಟ್ ಸಂಸ್ಥೆಗಳೂ ಬೆಂಬಲ ನೀಡಿದ್ದು, ಆ ಮೂಲಕ ಜನ ಸೇವೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.