ನವದೆಹಲಿ: ಮಹತ್ವದ ಬದಲಾವಣೆಯೊಂದರಲ್ಲಿ, ಭಾರತ ಹವಾಮಾನ ಇಲಾಖೆಯು (ಐಎಂಡಿ) ತನ್ನ ಜಮ್ಮು ಮತ್ತು ಕಾಶ್ಮೀರದ ಹವಾಮಾನ ಉಪವಿಭಾಗವನ್ನು “ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್” ಎಂದು ಉಲ್ಲೇಖಿಸಲು ಪ್ರಾರಂಭಿಸಿದೆ. ಮುಜಫರಾಬಾದ್ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಭಾಗವಾಗಿದ್ದರೆ, ಗಿಲ್ಗಿಟ್-ಬಾಲ್ಟಿಸ್ತಾನ್ ಸಹ ಪಾಕಿಸ್ಥಾನದ ಆಕ್ರಮ ವಶದಲ್ಲಿದೆ.
ನವದೆಹಲಿಯ ಐಎಂಡಿ ಹೊರಡಿಸಿದ ವಾಯುವ್ಯ ಭಾರತದ ದೈನಂದಿನ ಸವಮಾನ ಮುನ್ಸೂಚನೆಯಲ್ಲಿ ಈ ಹೆಸರಿನ ಬದಲಾವಣೆಯು ಮಂಗಳವಾರದಿಂದ ಪ್ರತಿಫಲಿಸಲು ಪ್ರಾರಂಭವಾಗಿದೆ. ಈ ದೈನಂದಿನ ಪ್ರದೇಶವಾರು ಮುನ್ಸೂಚನೆಗಳು ಸಂಪೂರ್ಣ ಉಪ-ವಿಭಾಗಕ್ಕೆ, ಮತ್ತು ಯಾವುದೇ ನಿರ್ದಿಷ್ಟ ಪ್ರದೇಶಗಳಿಗೆ ಅಲ್ಲ.
ಐಎಂಡಿ ಹಿರಿಯ ಅಧಿಕಾರಿಗಳು ಹೆಸರಿನಲ್ಲಿ ಬದಲಾವಣೆ ನಡೆದಿರುವುದನ್ನು ಖಚಿತಪಡಿಸಿದ್ದಾರೆ.
ಐಎಂಡಿ ಕ್ರಮವು ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಬದಲಿಸಿರುವುದನ್ನು ಪ್ರತಿಬಿಂಬಿಸುತ್ತದೆ. ಮಾತ್ರವಲ್ಲದೇ, ಪಾಕಿಸ್ಥಾನಕ್ಕೆ ಬಲವಾದ ಸಂದೇಶವನ್ನು ರವಾನಿಸುತ್ತದೆ. ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಫೆಡರಲ್ ಸರ್ಕಾರಕ್ಕೆ ಚುನಾವಣೆ ನಡೆಸಲು ಅನುಮತಿ ನೀಡುವ ಪಾಕಿಸ್ಥಾನ ಸುಪ್ರೀಂ ಕೋರ್ಟ್ ತೀರ್ಪಿನ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿರುವುದು ಮಹತ್ವಪೂರ್ಣ ವಿಷಯವಾಗಿದೆ.
ಏಪ್ರಿಲ್ 30 ರಂದು, ಪಾಕಿಸ್ಥಾನದ ಉನ್ನತ ನ್ಯಾಯಾಲಯವು ಫೆಡರಲ್ ಸರ್ಕಾರದ ಅರ್ಜಿಯನ್ನು ಸ್ವೀಕರಿಸಿ ಉಸ್ತುವಾರಿ ಸರ್ಕಾರವನ್ನು ಸ್ಥಾಪಿಸಲು ಮತ್ತು ಪ್ರಾಂತೀಯ ವಿಧಾನಸಭಾ ಚುನಾವಣೆಗಳನ್ನು ನಡೆಸಲು ಅನುಮತಿ ನೀಡಿತ್ತು. ಸೋಮವಾರ, ಭಾರತದ ವಿದೇಶಾಂಗ ಸಚಿವಾಲಯ (ಎಂಇಎ) ಈ ನಿರ್ಧಾರದ ವಿರುದ್ಧ “ಬಲವಾದ ಪ್ರತಿಭಟನೆ” ಸಲ್ಲಿಸಿತ್ತು, ಪಾಕಿಸ್ಥಾನದ ಸಂಸ್ಥೆಗಳು “ಅಕ್ರಮವಾಗಿ ಅಥವಾ ಬಲವಂತವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳ ಮೇಲೆ ಯಾವುದೇ ಬದಲಾವಣೆಗಳನ್ನು ತರುವ ನಿಲುವು ಸಹಿಸಲಸಾಧ್ಯ” ಎಂದು ಹೇಳಿದೆ.
ಇಂತಹ ಕ್ರಮಗಳನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ ಮತ್ತು “ಜಮ್ಮು ಮತ್ತು ಕಾಶ್ಮೀರದ ಭಾರತದ ಭೂಪ್ರದೇಶದ, ಪಾಕಿಸ್ಥಾನ ಆಕ್ರಮಿತ ಪ್ರದೇಶಗಳಲ್ಲಿ ಮೆಟೀರಿಯಲ್ ಬದಲಾವಣೆಗಳನ್ನು ತರಲು ನಿರಂತರ ಪ್ರಯತ್ನಗಳು ನಡೆಯುತ್ತಿದೆ” ಎಂದು ಎಂಇಎ ಹೇಳಿದೆ. ಪಾಕಿಸ್ಥಾನದ ವಿದೇಶಾಂಗ ಸಚಿವಾಲಯವು ಅದೇ ದಿನ ಹೇಳಿಕೆ ನೀಡಿ, ಭಾರತದ ಆರೋಪಗಳನ್ನು ತಿರಸ್ಕರಿಸಿದೆ.
ದೇಶದಲ್ಲಿ 36 ಹವಾಮಾನ ಉಪವಿಭಾಗಗಳಿವೆ, ಇದನ್ನು ರಾಜ್ಯದ ಗಡಿಗಳಲ್ಲಿ ವಿಶಾಲವಾಗಿ ವ್ಯಾಖ್ಯಾನಿಸಲಾಗಿದೆ, ಆದರೆ ಕೆಲವು ದೊಡ್ಡ ರಾಜ್ಯಗಳು ಅನೇಕ ಉಪ-ವಿಭಾಗಗಳನ್ನು ಹೊಂದಿದ್ದರೆ, ಕೆಲವು ಸಣ್ಣ ರಾಜ್ಯಗಳನ್ನು ಒಂದೇ ಉಪ-ವಿಭಾಗದಲ್ಲಿ ಒಟ್ಟುಗೂಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.