ನವದೆಹಲಿ: ಖ್ಯಾತ ಕವಿ, ರಾಷ್ಟ್ರಗೀತೆಯ ರಚನೆಕಾರ ರವೀಂದ್ರನಾಥ ಠಾಗೋರ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಶ್ರೇಷ್ಠ ಕವಿಗೆ ಗೌರವಾರ್ಪಣೆಗಳನ್ನು ಮಾಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಠಾಗೋರ್ ಅವರಿಗೆ ಟ್ವೀಟ್ ಮೂಲಕ ಗೌರವಗಳನ್ನು ಅರ್ಪಣೆ ಮಾಡಿದ್ದಾರೆ.
“ಗುರುದೇವ್ ಠಾಗೋರ್ ಅವರಿಗೆ ಜನ್ಮದಿನದ ಗೌರವಾರ್ಪಣೆಗಳು. ಹಲವು ಕ್ಷೇತ್ರಗಳಲ್ಲಿ ವರದಾನದಂತಿದ್ದ ಅವರು, ಭಾರತದ ಸ್ವಾತಂತ್ರ್ಯ ಚಳುವಳಿಗೆ ಬಲಿಷ್ಠ ಕೊಡುಗೆಗಳನ್ನು ನೀಡಿದ್ದಾರೆ. ಅವರು ಚಿಂತನೆಯಲ್ಲಿನ ಸ್ಪಷ್ಟತೆ ಮತ್ತು ಅಭಿವ್ಯಕ್ತಿ ಸದಾ ಅದ್ಭುತ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Tributes to Gurudev Tagore on his Jayanti. Gifted in several fields, he made a strong contribution towards India’s freedom movement. His clarity of thought and expression were always outstanding. pic.twitter.com/cMeVAarZ5h
— Narendra Modi (@narendramodi) May 8, 2020
ಏಷ್ಯಾದ ಮೊದಲ ನೋಬೆಲ್ ಪುರಸ್ಕೃತ ಕವಿ ಆಗಿರುವ ಠಾಗೋರ್ ಅವರು ಬಾಂಗ್ಲಾದೇಶ ಮತ್ತು ಭಾರತ ಎರಡರ ರಾಷ್ಟ್ರಗೀತೆ ರಚನೆಕಾರರೂ ಹೌದು. ಇಂದು ಅವರ 159ನೇ ಜನ್ಮ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.