ಬೆಂಗಳೂರು: ಬೇರೆ ರಾಜ್ಯಗಳ ವಲಸಿಗ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸುವ ಸಲುವಾಗಿ ರಾಜ್ಯ ಸರ್ಕಾರ ರೈಲುಗಳ ವ್ಯವಸ್ಥೆ ಮಾಡಿದ್ದು, ಇಂದಿನಿಂದ ತೊಡಗಿದಂತೆ ಮೂರು ರೈಲುಗಳು ಕಾರ್ಯ ನಿರ್ವಹಿಸಲಿದೆ.
ಈ ಹಿಂದೆಯೇ ಬೇರೆ ರಾಜ್ಯಗಳ ವಲಸೆ ಕಾರ್ಮಿಕರನ್ನು ಆಯಾಯ ರಾಜ್ಯಗಳಿಗೆ ತಲುಪಿಸುವ ಕುರಿತಂತೆ ರಾಜ್ಯ ಸರ್ಕಾರ ಇತರ 7 ರಾಜ್ಯಗಳಿಗೆ ಪತ್ರದ ಮುಖೇನ ತಿಳಿಸಿತ್ತು. ಆದರೆ ಬಿಹಾರ ಹೊರತು ಪಡಿಸಿದಂತೆ ಇನ್ಯಾವ ರಾಜ್ಯಗಳೂ ಕಂದಾಯ ಇಲಾಖೆಯ ಈ ಪತ್ರಕ್ಕೆ ಉತ್ತರ ನೀಡಿಲ್ಲದೇ ಇದ್ದುದರಿಂದ ಗುರುವಾರ ಮತ್ತೆ ಪತ್ರ ಬರೆಯಲಾಗಿದೆ. ಈ ಕಾರಣದಿಂದಷ್ಟೇ ವಲಸಿಗ ಕಾರ್ಮಿಕರ ರೈಲು ಸೇವೆಯನ್ನು ರದ್ದು ಗೊಳಿಸಿದ್ದಾಗಿ ಸರ್ಕಾರ ಪ್ರತಿಪಕ್ಷಗಳ ಟೀಕೆಗೆ ಸ್ಪಷ್ಟನೆ ನೀಡಿದೆ.
ಇನ್ನು ಇಂದಿನಿಂದಲೇ ವಲಸಿಗರನ್ನು ಅವರವರ ರಾಜ್ಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದ್ದು, ಜಾರ್ಖಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳಗಳಿಗೆ ಪ್ರತಿ ನಿತ್ಯ 2 ರೈಲುಗಳು ಓಡಾಟ ನಡೆಸಲಿದೆ. ಬಿಹಾರ, ತ್ರಿಪುರಾ, ಮಣಿಪುರಗಳಿಗೆ ಒಂದೊಂದು ರೈಲು ವಲಸಿಗರನ್ನು ಕರೆದೊಯ್ಯಲಿದೆ. ಮೇ 8 ರಿಂದ ತೊಡಗಿದಂತೆ 15 ರ ವರೆಗೆ ರೈಲ್ವೆ ಸೇವೆ ನೀಡಲು ತೀರ್ಮಾನಿಸಿರುವುದಾಗಿಯೂ ರಾಜ್ಯ ಸರ್ಕಾರ ಹೇಳಿಕೆ ನೀಡಿದೆ.
ಇನ್ನು ಕೊರೋನಾ ನಿಯಂತ್ರಣಕ್ಕಾಗಿ ಈ ರೈಲುಗಳಲ್ಲಿ ಕೇವಲ 1200 ಜನರಿಗೆ ಸಂಚಾರಕ್ಕೆ ಅನುಮತಿ ಇದೆ. ಅಲ್ಲದೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಇನ್ನಿತರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ ಸೇವೆ ಒದಗಿಸುವುದಾಗಿಯೂ ಸರ್ಕಾರ ತಿಳಿಸಿದೆ.
ಇನ್ನು ಈ ಕುರಿತಂತೆ ಸುದ್ದಿಗಾರರ ಜೊತೆಗೂ ಮಾಹಿತಿ ಹಂಚಿಕೊಂಡಿರುವ ಸಿಎಂ ಯಡಿಯೂರಪ್ಪ, ರಾಜ್ಯದಿಂದ ಈ ವರೆಗೆ ಸುಮಾರು 1 ಲಕ್ಷ ವಲಸಿಗರನ್ನು 3500 ಬಸ್ಸುಗಳು ಹಾಗೂ ರೈಲುಗಳ ಮೂಲಕ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಆದಷ್ಟು ಶೀಘ್ರ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಆರಂಭವಾಗಲಿದ್ದು, ಅದಕ್ಕಾಗಿ ವಲಸಿಗರು ರಾಜ್ಯದಲ್ಲಿಯೇ ಉಳಿದುಕೊಳ್ಳುವ ಬಗ್ಗೆ ಈ ಹಿಂದೆ ಮನವಿ ಮಾಡಿದ್ದಾಗಿಯೂ ಹೇಳಿಕೆ ನೀಡಿದ್ದಾರೆ. ಜೊತೆಗೆ ಸ್ಥಳೀಯ ಕಾರ್ಮಿಕರೂ ನೇರಿದಂತೆ ಎಲ್ಲಾ ಕಾರ್ಮಿಕ ವರ್ಗಕ್ಕೂ ಸೇರಿ 1600 ಕೋಟಿ ರೂ. ಗಳನ್ನು ಬಿಡುಗೆಯನ್ನು ಮಾಡಲಾಗಿದೆ ಎಂದೂ ಸಿಎಂ ತಿಳಿಸಿದ್ದಾರೆ.
ಇನ್ನು ಈ ಕುರಿತಾಗಿ ಸರ್ಕಾರ ಹೈಕೋರ್ಟ್ಗೂ ಸ್ಪಷ್ಟನೆ ನೀಡಿದ್ದು, ಬರೆದ ಪತ್ರಕ್ಕೆ ಇತರ ರಾಜ್ಯಗಳು ಸ್ಪಂದಿಸದ ಕಾರಣ ರೈಲು ರದ್ದುಗೊಳಿಸಿದ್ದಾಗಿ ತಿಳಿಸಿದೆ. ಅಲ್ಲದೆ ಉತ್ತರ ನೀಡಿದ್ದ ಬಿಹಾರವೂ ಕ್ವಾರಂಟೈನ್ ಸಮಸ್ಯೆಯಾಗದಂತೆ ದಿನಕ್ಕೆ 1 ರೈಲಿನಲ್ಲಿ ಜನರನ್ನು ಕಳಿಸುವಂತೆ ಕೋರಿಕೊಂಡಿತ್ತು ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.