ವಿಶಾಖಪಟ್ಟಣಂ : ವಿಶಾಖಪಟ್ಟಣಂ ಅನಿಲ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲಿಯೇ ಪರಿಹಾರ ಕಾರ್ಯದಲ್ಲಿ ಧುಮುಕಿದ ಆರೆಸ್ಸೆಸ್ ಸ್ವಯಂಸೇವಕರು, ಪೀಡಿತ ಜನರಿಗೆ ಆಹಾರ ಮತ್ತು ವೈದ್ಯಕೀಯ ಸೇವಾ ಪೂರೈಕೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ವಿಶಾಖಪಟ್ಟಣಂನ ವೆಂಕಟಪುರಂ ಬಳಿಯ ಗೋಪಾಲಪಟ್ಟಣಂನಲ್ಲಿರುವ ಪಾಲಿಮರ್ ಸ್ಥಾವರದಿಂದ ಗುರುವಾರ ಮುಂಜಾನೆ 3 ಗಂಟೆಗೆ ರಾಸಾಯನಿಕ ಅನಿಲ ಸೋರಿಕೆಯಾದಾಗ ಸುತ್ತಮುತ್ತಲಿನ ಗ್ರಾಮಗಳ ಜನತೆ ತೀವ್ರವಾಗಿ ನಿರ್ಜಲೀಕರಣಗೊಂಡಿದ್ದರು. ವಿಶೇಷವಾಗಿ ಶಿಶುಗಳು, ತುಂಬಾ ಅನಾರೋಗ್ಯಕ್ಕೆ ಒಳಗಾಗಿದ್ದರು.
ಈ ಸಮಯದಲ್ಲಿ, ಗುಡಿಲೋವಾದ ವಿಜ್ಞಾನ ವಿಹಾರದ ಶ್ರೀ ವಿವೇಕಾನಂದ ಆಸ್ಪತ್ರೆಯ ಆಂಬುಲೆನ್ಸ್ಗಳನ್ನು ತುರ್ತು ಸೇವೆಗಳಿಗಾಗಿ ಘಟನಾ ಸ್ಥಳಕ್ಕೆ ಧಾವಿಸಿದವು.
ಇತರ ಗ್ರಾಮಗಳಾದ ವೆಂಕಟಪುರಂ ಮತ್ತು ಆರ್. ಆರ್. ವೆಂಕಟಪುರಂ ಜನರು ಭಯಬೀತರಾಗಿ ತಮ್ಮ ಮನೆಗಳನ್ನು ತ್ಯಜಿಸಿ ಸಿಂಹಾಚಲಂ ಮತ್ತು ಆದಿವಿವರಂ ಗ್ರಾಮಗಳಿಗೆ ಓಡಿ ಹೋಗಿ ಅಲ್ಲಿ ಮರಗಳ ಕೆಳಗೆ, ದೇವಸ್ಥಾನಗಳ ಚೌಲ್ಟರಿಗಳಲ್ಲಿ ಆಶ್ರಯ ಪಡೆದಿದ್ದರು.
ಅಲ್ಲಿಗೆ ತೆರಳಿದ ಮಾಧವಧಾರ, ಸೀತಮ್ಮ ಧಾರ ಮತ್ತು ದ್ವಾರಕಾನಗರದ ಆರ್ಎಸ್ಎಸ್ ಸ್ವಯಂಸೇವಕರು ಸಂತ್ರಸ್ತರಿಗೆ ಅಗತ್ಯ ಸೇವೆ ಒದಗಿಸಿದರು.
ಮನೆಗಳಲ್ಲಿ ಹಾಗೂ ಲಲಿತಾ ಪೀಟಂನಲ್ಲಿ ಆಹಾರ ಪ್ಯಾಕೆಟ್ಗಳನ್ನು ತಯಾರಿಸಲಾಯಿತು. ಒಟ್ಟು 5000 ಆಹಾರ ಪಾರ್ಸೆಲ್ಗಳನ್ನು ತಯಾರಿಸಿ ಕುಡಿಯುವ ನೀರು, ಮಜ್ಜಿಗೆ ಜೊತೆಗೆ ಇವರಿಗೆ ವಿತರಿಸಲಾಯಿತು.
ರಾಸಾಯನಿಕ ಅನಿಲವನ್ನು ಉಸಿರಾಡುವುದರಿಂದ ತೊಂದರೆಗೆ ಸಿಲುಕಿರುವ ಪ್ರಹ್ಲಾದಪುರಂನ ನಿವಾಸಿಗಳಿಗೆ ಪ್ರಹ್ಲಾದಪುರಂ ಸುತ್ತಮುತ್ತಲಿನ ಜನರು ಉಚಿತ ಹೋಮಿಯೋಪತಿ ಮಾತ್ರೆಗಳನ್ನು ನೀಡಿ ಉಪಚರಿಸಿದರು. ಪರಿಹಾರ ಕಾರ್ಯ ಇನ್ನೂ ಮುಂದುವರೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.