ಬೆಂಗಳೂರು: ಕೋವಿಡ್-19 ನ ಎಫೆಕ್ಟ್ ಶೈಕ್ಷಣಿಕ ವರ್ಷಾರಂಭ ಮತ್ತು ಪಠ್ಯ ಕ್ರಮಗಳ ಮೇಲೆಯೂ ಆಗಿದ್ದು, 2020-21 ನೇ ಸಾಲಿನಲ್ಲಿ ಪ್ರತಿ ವರ್ಷದಂತೆ ಜೂನ್ನಲ್ಲಿಯೇ ಶಾಲೆಗಳು ಆರಂಭವಾಗುವ ಸಾಧ್ಯತೆಗಳು ಕಡಿಮೆ ಎಂದು ತಿಳಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಅದಕ್ಕನುಗುಣವಾಗಿ ಪಠ್ಯ ಕ್ರಮಗಳನ್ನು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವಧಿಗೆ ತಕ್ಕಂತೆ ಪಠ್ಯಕ್ರಮ ರೂಪಿಸಿ, ವಿದ್ಯಾರ್ಥಿಗಳ ಹೊರೆ ಇಳಿಸುವಂತೆ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಮಾತುಕತೆಯನ್ನೂ ಮುಗಿಸಿರುವ ಸಚಿವರು, ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಕ್ರಮಕ್ಕೆ ಅನ್ವಯವಾಗುವಂತೆ ಇದನ್ನು ಕಾರ್ಯಗತ ಮಾಡಲು ಸೂಚಿಸಿದ್ದಾರೆ. ಅದರಂತೆ ಹೆಚ್ಚುವರಿ ಪಠ್ಯಗಳನ್ನು ಗುರುತಿಸಿ, ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಪಠ್ಯಕ್ರಮ ರೂಪುಗೊಳಿಸಲು ಈಗಾಗಲೇ ಆದೇಶ ನೀಡಿದ್ದಾರೆ.
ಜೊತೆಗೆ ಕೋವಿಡ್-19 ಸಾಂಕ್ರಾಮಿಕ ರೋಗದ ಸಾಮಾಜಿಕ ಹೊಂದಾಣಿಕೆಯ ಬಗ್ಗೆ ಎಲ್ಲಾ ತರಗತಿಗಳಿಗೂ ಪಠ್ಯ ರೂಪಿಸಲು ಸೂಚಿಸಲಾಗಿದೆ. ಇದನ್ನು ಪಠ್ಯಕ್ರಮದ ಭಾಗವಾಗಿ ಕಡ್ಡಾಯವಾಗಿ ಅನುಷ್ಠಾನ ಮಾಡುವಂತೆಯೂ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮಕ್ಕಳವಾಣಿ ಯೂಟ್ಯೂಬ್ ಚಾನೆಲ್ ರಾಷ್ಟ್ರವ್ಯಾಪಿ ಮನ್ನಣೆ ಪಡೆದಿದ್ದು, ಪಠ್ಯಗಳಲ್ಲಿ ಇಂತಹ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ಮಾಡುವಂತೆಯೂ ಅವರು ಹೇಳಿದ್ದಾರೆ. 1 ರಿಂದ 10 ನೇ ತರಗತಿಯ ವಿಷಯಗಳನ್ನು ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಉತ್ತಮ ಶಿಕ್ಷಕರರಿಂದ ಬೋಧಿಸಿ, ಅದನ್ನು ಚಿತ್ರೀಕರಿಸಿ ಯೂಟ್ಯೂಬ್ನಲ್ಲಿ ಲಭ್ಯವಾಗುವಂತೆ ಮಾಡುವುದಕ್ಕೂ ಕ್ರಮ ಕೈಗೊಳ್ಳಲು ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಮುಂಬರುವ ಶೈಕ್ಷಣಿಕ ವರ್ಷದ ಕುರಿತು ಅಗತ್ಯವಾಗಿ ಆಗಬೇಕಾದ ಸಿದ್ಧತೆ, ಪ್ರಯತ್ನದ ಬಗ್ಗೆ ಕೈಗೊಂಡಿರುವ ಕೆಲ ನಿರ್ಧಾರಗಳು. pic.twitter.com/H9QuIqEV8w
— S.Suresh Kumar, Minister – Govt of Karnataka (@nimmasuresh) May 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.