ಶ್ರೀನಗರ: 2017ರಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಯ ಮಗಳು ಅಳುತ್ತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಜಮ್ಮು-ಕಾಶ್ಮೀರದ ಪೊಲೀಸ್ ಅಧಿಕಾರಿಯೊಬ್ಬರು ಇತ್ತೀಚಿಗೆ ಪುಲಿಟ್ಜರ್ ಅವಾರ್ಡ್ ಪಡೆದ ಛಾಯಾಗ್ರಾಹಕರ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಫೋಟೋವನ್ನು ಹಂಚಿಕೊಂಡಿರುವ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಹುಸೇನ್ ಅವರು, “ಈ ಫೋಟೋ ಮಾನವೀಯತೆಯ ಅಂತಃಸಾಕ್ಷಿಯನ್ನು ದೀರ್ಘಕಾಲದವರೆಗೆ ಕಾಡಲಿದೆ. ಕಾಶ್ಮೀರದಲ್ಲಿ 2017ರಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಯ ದುಃಖತಪ್ತ ಮಗಳು. ಈ ಫೋಟೋಗೆ ಯಾವುದಾದರು ಅವಾರ್ಡ್ ಇದೆಯೇ?” ಎಂದು ಪ್ರಶ್ನಿಸಿದ್ದಾರೆ.
ಇತ್ತೀಚಿಗಷ್ಟೇ ಕಣಿವೆ ಕೇಂದ್ರಾಡಳಿತ ಪ್ರದೇಶದ ಮೂರು ಛಾಯಾಗ್ರಾಹಕರು ಜಮ್ಮು-ಕಾಶ್ಮೀರದಲ್ಲಿ 370ನೇ ರದ್ಧತಿಯ ಬಳಿಕ ಲಾಕ್ ಡೌನ್ ಸಂದರ್ಭದಲ್ಲಿ ತೆಗೆಯಲಾದ ಫೋಟೋಗಾಗಿ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಚನ್ನಿ ಆನಂದ್, ಮುಕ್ತಾರ್ ಖಾನ್ ಮತ್ತು ದಾರಿ ಯಾಸಿನ್ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕಾಶ್ಮೀರವನ್ನು ಭಾರತ ಆಕ್ರಮಿತ ಪ್ರದೇಶ ಎಂದು ಪುಲಿಟ್ಜರ್ ಬೋರ್ಡ್ ತನ್ನ ವೆಬ್ಸೈಟಿನಲ್ಲಿ ಬರೆದುಕೊಂಡಿದೆ. ಫೋಟೋ ಬಗ್ಗೆ ಬೋರ್ಡ್, “ಸಂವಹನ ನಿರ್ಬಂಧದ ಮೂಲಕ ಭಾರತ ಸ್ವಾತಂತ್ರ್ಯವನ್ನು ಹಿಂತೆಗೆದುಕೊಂಡ ಸ್ಪರ್ಧೆಯಲ್ಲಿ ಕಾಶ್ಮೀರ ಜೀವನದ ಗಮನಾರ್ಹ ಚಿತ್ರ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.