ಅಸ್ಸಾಂ : ಕೊರೋನಾ ಲಾಕ್ಡೌನ್ನಿಂದಾಗಿ ದೇಶದ ಬಡ ಜನರು ಆರ್ಥಿಕ ಸಮಸ್ಯೆಯ ಜೊತೆಗೆ, ಆಹಾರ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಈ ಸಂದರ್ಭದಲ್ಲಿ ದೇಶದೆಲ್ಲೆಡೆಯಿಂದ ಅದೆಷ್ಟೋ ಜನರು ಕೊರೋನಾ ಎಂಬ ಮಹಾಮಾರಿಯಿಂದ ದೇಶವನ್ನು ರಕ್ಷಿಸುವ ಸಲುವಾಗಿ, ಬಡವರ ಸೇವೆಗಾಗಿ ದೇಣಿಗೆಗಳನ್ನು ನೀಡಿದ್ದಾರೆ. ಈಗ ತನ್ನ ಮದುವೆಗೆಂದು ಕೂಡಿಟ್ಟ 1 ಲಕ್ಷ ರೂ. ಗಳನ್ನೇ ಜನ ಸೇವೆ, ದೇಶ ಸೇವೆಗೆಂದು ನೀಡಿ ಈ ಹುಡುಗಿ ಇತರರಿಗೂ ಮಾದರಿಯಾಗಿದ್ದಾರೆ.
ಅವರ ಹೆಸರು ರೀಮಾ ಘೋಷ್. ಎಬಿವಿಪಿ ಅಸ್ಸಾಂನ ರಂಗಿಯಾ ಘಟಕದ ಜೊತೆ ಕಾರ್ಯದರ್ಶಿ. ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವಾಕೆ. ಈಗ ತಮ್ಮ ಮದುವೆಗೆಂದು ಕೂಡಿಟ್ಟ 1 ಲಕ್ಷ ರೂ. ಗಳನ್ನು ಸಿಎಂ ರಿಲೀಫ್ ಫಂಡ್ಗೆ ನೀಡುವ ಮೂಲಕ ತನಗೆ ದೇಶ ಮುಖ್ಯ ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ. ಈ ಹಣವನ್ನು ರಂಗಿಯಾದ ಶಾಸಕ ಭಾಪೇಶ್ ಕಲಿತಾ ಅವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.
ನನ್ನ ಮದುವೆಗಾಗಿ ತಂದೆ ಕೂಡಿಟ್ಟ ಹಣ ಈಗ ಸಂಕಷ್ಟದಲ್ಲಿ ದೇಶಕ್ಕಾಗಿ ಬಳಕೆಯಾಗುತ್ತಿದೆ. ಇದನ್ನು ನಾನು ನನ್ನ ಉನ್ನತ ಶಿಕ್ಷಣಕ್ಕಾಗಿ ಬಳಕೆ ಮಾಡಬೇಕೆಂದಿದ್ದೆ. ಆದರೆ ಅದೇ ಸಂದರ್ಭದಲ್ಲಿ ದೇಶ ಕೊರೋನಾ ಎಂಬ ಮಹಾಮಾರಿಗೆ ತುತ್ತಾಗಿದೆ. ಇಂತಹ ಸಂದರ್ಭದಲ್ಲಿ ದೇಶಕ್ಕೆ ಆರ್ಥಿಕ ಸಹಕಾರದ ಅಗತ್ಯವಿದ್ದು, ಬಡವರಿಗೆ, ಅಗತ್ಯವಿರುವವರಿಗೆ ಸಹಾಯವಾಗಲಿ ಎಂದು ತಾನು ದಾನ ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನು ತನ್ನ ಈ ಆಸೆಗೆ ಯಾವುದೇ ವಿರೋಧವನ್ನು ತೋರದೆ, ಹಣವನ್ನು ದೇಣಿಗೆಯಾಗಿ ನೀಡಲು ಒಪ್ಪಿಕೊಂಡ ತನ್ನ ಹೆತ್ತವರಿಗೂ ಈ ಸಂದರ್ಭದಲ್ಲಿ ರೀಮಾ ಧನ್ಯವಾದ ಸಮರ್ಪಿಸಿದ್ದಾರೆ. ಜೊತೆಗೆ ದೇಶವನ್ನು ಈ ವೈರಸ್ನಿಂದ ಕಾಪಾಡುವ ಸಲುವಾಗಿ ಎಲ್ಲರೂ ಕೈ ಜೋಡಿಸುವಂತೆಯೂ ರೀಮಾ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.