ನವದೆಹಲಿ: ಬುದ್ಧ ಪೂರ್ಣಿಮೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ, ಭಾರತದ ಸಾಧನೆಯನ್ನು ಬುದ್ಧನ ಬೋಧನೆಗಳೊಂದಿಗೆ ಬೆಸೆದಿದ್ದಾರೆ.
ಭಾರತ ಇಡೀ ವಿಶ್ವದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಮಸ್ತ ಮಾನವೀಯತೆಗೆ ಈ ಕಾರ್ಯವನ್ನು ಮುಂದುವರೆಸಲಿದೆ ಎಂದು ಹೇಳಿದ್ದಾರೆ.
ಬುದ್ಧ ಮನಸ್ಸೇ ಸರ್ವೋಚ್ಚ ಮತ್ತು ಧರ್ಮದ ಮೂಲ, ಎಲ್ಲಾ ಪ್ರವರ್ತಿಗಳಿಗೂ ಮನಸ್ಸು ಮೂಲ. ನಮ್ಮ ಮನಸ್ಸು ಪ್ರಸ್ತುತವಾಗಿದ್ದಾರೆ ನಮ್ಮ ದೈಹಿಕ ಪ್ರಸ್ತುತತೆಯ ಕೊರತೆಯು ನಮಗೆ ಕಾಣಿಸಿಕೊಳ್ಳುವುದಿಲ್ಲ ಭಗವಾನ್ ಬುದ್ಧ ಪ್ರತಿಪಾದಿಸಿದ್ದಾನೆ. ಇಂದು ನಾನು ನಿಮ್ಮೊಂದಿಗೆ ಇರುವುದು ಸಂತೋಷದ ವಿಷಯ. ಆದರೆ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲ. ಹೀಗಾಗಿ ತಂತ್ರಜ್ಞಾನವನ್ನು ಬಳಕೆ ಮಾಡಿ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ಎಂದಿದ್ದಾರೆ.
ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಹಲವಾರು ಮಂದಿ ದಿನದ 24 ಗಂಟೆ ಇತರರಿಗೆ ಸಹಾಯ ಮಾಡುವುದರಲ್ಲಿ ನಿರತರಾಗಿದ್ದಾರೆ. ರೋಗ ಹರಡುವುದನ್ನು ತಡೆಗಟ್ಟಲು, ಕಾನೂನು ವ್ಯವಸ್ಥೆಯನ್ನು ಕಾಪಾಡಲು, ನೈರ್ಮಲ್ಯವನ್ನು ಕಾಪಾಡಲು, ರೋಗಿಗಳ ಆರೈಕೆ ಹೇಗೆ ತಮ್ಮ ಅನುಕೂಲವನ್ನು ತ್ಯಾಗಮಾಡಿ ಹಲವರು ಸೇವೆಯಲ್ಲಿ ನಿರತರಾಗಿದ್ದಾರೆ. ಎಲ್ಲರೂ ಶ್ಲಾಘನೆ ಮತ್ತು ಕೃತಜ್ಞತೆಯನ್ನು ಪಡೆಯಲು ಅರ್ಹರಾಗಿದ್ದಾರೆ.
ಬುದ್ಧ ನಮಗೆ ನೀಡಿದ ನಾಲ್ಕು ಸತ್ಯಗಳೆಂದರೆ ದಯೆ, ಸಹಾನುಭೂತಿ, ಸಂತೋಷ ಮತ್ತು ದುಃಖದಲ್ಲಿ ನಿರ್ಲಿಪ್ತತೆ, ಇದ್ದದ್ದನ್ನು ಇದ್ದಹಾಗೆ ಸ್ವೀಕರಿಸುವ ಗುಣ. ಇಂದು ಕೂಡ ಭಾರತ ಯಾವುದೇ ಸ್ವಾರ್ಥ ಮತ್ತು ತಾರತಮ್ಯವಿಲ್ಲದೆ ಬಿಕ್ಕಟ್ಟಿನ ಸಂದರ್ಭದಲ್ಲಿ ಬಲಿಷ್ಠವಾಗಿದೆ. ಇಂತಹ ಬಲಿಷ್ಠತೆ ಜಗತ್ತಿನ ಬೇರೆಲ್ಲೂ ಕಾಣಸಿಗುತ್ತಿಲ್ಲ ಎಂದಿದ್ದಾರೆ.
ಇದೇ ಕಾರಣಕ್ಕೆ ಜಗತ್ತು ಇಂದು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವನ್ನು ಸ್ಮರಿಸುತ್ತಿದೆ ಮತ್ತು ಭಾರತವು ಸಹಾಯ ಮಾಡುವ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿಲ್ಲ. ಸಾಧ್ಯವಿರುವ ಪ್ರತಿಯೊಂದು ವಿಧಾನದಲ್ಲೂ ದೇಶದ ಜನರನ್ನು ರಕ್ಷಣೆ ಮಾಡುವ ಮತ್ತು ಜಾಗತಿಕ ಬೇಡಿಕೆಗಳನ್ನು ಪೂರೈಸುವ ಪ್ರಾಮಾಣಿಕ ಪ್ರಯತ್ನವನ್ನು ಭಾರತ ಮಾಡುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.