ತಿರುವನಂತಪುರ: ಕೇರಳದ ಕೊಚ್ಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಶ್ರೀ ಆದಿ ಶಂಕರಾಚಾರ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರಿಡುವಂತೆ ಸಹಿ ಅಭಿಯಾನ ಆರಂಭಗೊಂಡಿದೆ.
ಶಂಕರಾಚಾರ್ಯರ ಹೆಸರಿಡುವ ಕುರಿತಂತೆ ಜನ್ಮಭೂಮಿ ದೈನಂದಿನ ಪತ್ರಿಕೆಯು ಪ್ರಕಟಿಸಿದ್ದ ಸುದ್ದಿಗೆ ಅನುಗುಣವಾಗಿ ವೈಚಾರಿಕ ಯಜ್ಞವೇದಿ ಎಂಬ ಗೆಳೆಯರ ಬಳಗ ಈ ಪ್ರಸ್ತಾಪ ಮುಂದಿಟ್ಟಿದೆ.
ಕೇರಳದ ಕಾಲಡಿಯಲ್ಲಿ ಜನಿಸಿದ ಸಂತ ಶಂಕರಾಚಾರ್ಯರಿಗೆ ನೀಡುವ ಅತೀ ದೊಡ್ಡ ಗೌರವ ಇದಾಗಿದೆ. ಶಂಕರಾಚಾರ್ಯರು ಜನಿಸಿದ ಕಾಲಡಿ ಈ ವಿಮಾನ ನಿಲ್ದಾಣದ ಹತ್ತಿರದಲ್ಲೇ ಇರುವುದರಿಂದ ನಿಲ್ದಾಣಕ್ಕೆ ಅವರ ಹೆಸರನ್ನಿಡುವುದು ಹೆಚ್ಚು ಸೂಕ್ತ ಎಂಬ ಅಭಿಪ್ರಾಯವನ್ನು ಸನಾತನನ್ ಪಿ. ಐ. ಎಂಬುವವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇವರ ಸ್ವಂತ ನಾಡು ಎಂದೇ ಜನಜನಿತವಾಗಿರುವ ಕೇರಳದಲ್ಲಿ, ಅಲ್ಲಿಯೇ ಹುಟ್ಟಿ ಬೆಳೆದ ಸರ್ವಶ್ರೇಷ್ಠ ವ್ಯಕ್ತಿಯೊಬ್ಬರ ಹೆಸರಿಡುವ ಮೂಲಕ ಅವರ ಗೌರವದ ಜೊತೆಗೆ ರಾಜ್ಯದ ಗೌರವವನ್ನು ಹೆಚ್ಚಿಸಬೇಕು ಎಂಬ ಅಭಿಪ್ರಾಯವನ್ನು ಇವರು ವ್ಯಕ್ತಪಡಿಸಿದ್ದಾರೆ. ತಾವು ಥಾಯ್ಲೆಂಡ್ಗೆ ಹೋಗಿದ್ದ ಸಂದರ್ಭ ಅಲ್ಲಿ ಗಮನಿಸಿದ ವಿಚಾರವೊಂದರ ಬಗ್ಗೆ ಬೆಳಕು ಚೆಲ್ಲಿರುವ ಇವರು, ಅಂತಹ ಸ್ಥಿತಿ ಭಾರತದಲ್ಲಿಲ್ಲದೇ ಇರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ.
ಬ್ಯಾಂಕಾಕ್ನ ವಿಮಾನ ನಿಲ್ದಾಣದಲ್ಲಿ ಕ್ಷೀರ ಸಾಗರವನ್ನು ಕಡೆಯುತ್ತಿರುವುದನ್ನು ಪ್ರತಿಬಿಂಬಿಸುವ ಕೆತ್ತನೆ ಮಾಡಲಾಗಿದ್ದು, ಅದನ್ನು ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಫೋಟೋ ತೆಗೆದುಕೊಳ್ಳುತ್ತಾರೆ ಆ ವಿಮಾನ ನಿಲ್ದಾಣಕ್ಕೆ ಸುವರ್ಣ ಭೂಮಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಎಂದು ಹೆಸರಿಸುವ ಮೂಲಕ ಭಾರತದ ಹಿರಿಮೆಯನ್ನು ಹೆಚ್ಚಿಸುವ ಕೆಲಸವನ್ನು ಆ ದೇಶದಲ್ಲಿ ಮಾಡಿದ್ದಾರೆ. ಥಾಯ್ಲೆಂಡ್ನ ಈ ಮಹತ್ಕಾರ್ಯಕ್ಕೆ ಪ್ರತಿಯೊಬ್ಬ ಭಾರತೀಯನೂ ತಲೆ ಬಾಗಲೇ ಬೇಕು ಎಂದು ಅವರು ಹೇಳುತ್ತಾರೆ.
ಇನ್ನು ಭಾರತದಲ್ಲಿ ಮಾತ್ರ ದೇಶದ ಭವ್ಯತೆ, ಪರಂಪರೆಯನ್ನು ಎತ್ತಿ ಹಿಡಿಯುವ, ಪೌರಾಣಿಕ, ಐತಿಹಾಸಿಕ ವಿಚಾರಗಳ ಬಗ್ಗೆ ಮಾಹಿತಿ ನೀಡುವ, ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯಾವುದೇ ಕೆಲಸಗಳಾಗದೇ ಇರುವುದು ಬೇಸರದ ವಿಚಾರ. ಆದ್ದರಿಂದ ಥಾಯ್ಲೆಂಡ್ನಲ್ಲಿ ಕಂಡ ಆ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಕಾರ್ಯಗಳು ಭಾರತದಲ್ಲಿಯೂ ಆಗಬೇಕಾಗಿದೆ. ಅದಕ್ಕಾಗಿ ಆರಂಭಿಸಲಾದ ಈ ಆಂದೋಲನ ಬೆಂಬಲಿಸಲು ಪ್ರತಿಯೊಬ್ಬ ಭಾರತೀಯನೂ ಕೈಜೋಡಿಸುವಂತೆ ಅವರು ಮನವಿ ಮಾಡಿದ್ದಾರೆ.
ಇದೀಗ ಶಂಕರಾಚಾರ್ಯರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವಂತ ಆರಂಭಿಸಲಾದ ಅಭಿಯಾನಕ್ಕೆ 19,510 ಸಹಿ ಬಿದ್ದಿದೆ.
ಸಹಿ ಮಾಡಲು ಈ ಲಿಂಕ್ ಬಳಸಬಹುದು
Sign the Petition
Kochi International Airport to be named as : “Shri Aadi Shankaracharya International Airport, Nedumbasseri”(SASIAN) This is referenced to a news item which appeared in Janmabhoomi daily, Bengaluru edition dated 30th April 2020. Vycharika Yajnavedi Online friends have mooted this proposal during the birth anniversary occasion of Shri Sankaracharya!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.