ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗದೆ ವಿದೇಶದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಭಾರತೀಯರನ್ನು ಸಲುವಾಗಿ ಕೇಂದ್ರ ಸರ್ಕಾರ ‘ವಂದೇ ಭಾರತ್ ಮಿಷನ್’ ಅನ್ನು ಆರಂಭಿಸಿದೆ. ಇದು ಅತಿ ದೊಡ್ಡ ಸ್ಥಳಾಂತರ ಮಿಷನ್ ಆಗಿದೆ. ಇಂದಿನಿಂದಲೇ ಈ ಮಿಷನ್ ಅಡಿಯಲ್ಲಿ ಭಾರತೀಯರನ್ನು ಕರೆತರುವ ಕಾರ್ಯ ಆರಂಭಗೊಳ್ಳಲಿದೆ.
ಈ ಮಿಷನ್ ಅಡಿಯಲ್ಲಿ ಸರ್ಕಾರ ಸುಮಾರು 64 ವಿಮಾನಗಳನ್ನು ಮೇ 13 ರ ವರೆಗೆ ಕಾರ್ಯಾಚರಿಸಲಿದೆ. ಇದರ ಮೂಲಕ ಸುಮಾರು 14,800 ಅನಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರಲಾಗುತ್ತಿದೆ.
ಈ ಬಗ್ಗೆ ಮಂಗಳವಾರ ಮಾಹಿತಿಯನ್ನು ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, “ಮಿಷನ್ಗೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳು ಪ್ರಾರಂಭಗೊಂಡಿದೆ ಮತ್ತು ವಿದೇಶದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರು ಅಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು” ಎಂದಿದ್ದಾರೆ.
64 ವಿಮಾನಗಳ ಪೈಕಿ ಯುಎಇಯಿಂದ 2, ಖತಾರ್ನಿಂದ 2, ಸೌದಿ ಅರೇಬಿಯಾದಿಂದ 5, ಯುಕೆಯಿಂದ 7, ಸಿಂಗಾಪುರದಿಂದ 5, ಅಮೆರಿಕಾದಿಂದ 7, ಬಾಂಗ್ಲಾದೇಶದಿಂದ 7, ಫಿಲಿಫೈನ್ಸ್ನಿಂದ 5, ಬಹರೈನ್ನಿಂದ 2, ಮಲೇಷಿಯಾದಿಂದ 7, ಕುವೈಟ್ನಿಂದ 5 ಮತ್ತು ಒಮನ್ನಿಂದ ಎರಡು ವಿಮಾನಗಳು ಭಾರತೀಯರನ್ನು ಹೊತ್ತು ತರಲಿದೆ.
ಒಟ್ಟು ವಿಮಾನಗಳ ಪೈಕಿ 15 ವಿಮಾನಗಳು ಕೇರಳಕ್ಕೆ ಬರಲಿದೆ, ತಮಿಳುನಾಡು ಮತ್ತು ದೆಹಲಿಗೆ ತಲಾ 11 ವಿಮಾನಗಳು ಬರಲಿದೆ. ಏಳು ವಿಮಾನಗಳು ಮಹಾರಾಷ್ಟ್ರಕ್ಕೆ ಮತ್ತು ತೆಲಂಗಾಣಕ್ಕೆ ಜನರನ್ನು ಹೊತ್ತು ತರಲಿದೆ ಮತ್ತು 5 ವಿಮಾನಗಳು ಗುಜರಾತಿಗೆ ಬರಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.