ನವದೆಹಲಿ: ಕೊರೋನಾದಿಂದ ದೇಶ ಆರ್ಥಿಕ ಅಭದ್ರತೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಮೇ 5 ರ ವರೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ 39 ಕೋಟಿ ಜನರಿಗೆ 34,800 ಕೋಟಿ ರೂ. ಗಳಷ್ಟು ಸಹಾಯಧನವನ್ನು ಒದಗಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಮಾರ್ಚ್ 26 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಯೋಜನೆಗೆ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು, ಡಿಜಿಟಲ್ ಪೇಮೆಂಟ್ ಮೂಲಕ ಇದು ಲಾಕ್ಡೌನ್ನಂತಹ ಸಂಕಷ್ಟದ ಸಮಯದಲ್ಲಿ ಬಡ ಜನರ ನೆರವಿಗೆ ಬಂದಿರುವುದಾಗಿಯೂ ಸರ್ಕಾರ ಹೇಳಿದೆ.
ಕಿಸಾನ್ ಯೋಜನೆಯ ಮೂಲಕ 8.19 ಕೋಟಿ ರೈತರಿಗೆ 16,394 ಕೋಟಿ ರೂ. ಗಳ ನೆರವನ್ನು ಸರ್ಕಾರ ನೀಡಿದೆ ಅಲ್ಲದೆ ಜನಧನ ಖಾತೆ ಹೊಂದಿರುವ ಜನರಿಗೆ ಮೊದಲ ಕಂತು 20.5 ಕೋಟಿ ಮಹಿಳೆಯರ ಖಾತೆಗೆ 10,025 ಕೋಟಿ ರೂ., ಎರಡನೇಯ ಕಂತಿನಲ್ಲಿ 2,785 ಕೋಟಿ ರೂ., ವಿಧವೆಯರು, ವಿಶೇಷ ಚೇತನರು ಮತ್ತು ವೃದ್ಧರ ಖಾತೆಗೆ 1405 ಕೋಟಿ ರೂ., 2.20 ನಿರ್ಮಾಣ ಕಾರ್ಮಿಕರಿಗೆ 3492 ಕೋಟಿ ರೂ. ಗಳ ನೆರವನ್ನು ಈಗಾಗಲೇ ನೀಡಿರುವುದಾಗಿಯೂ ಕೇಂದ್ರ ಮಾಹಿತಿ ನೀಡಿದೆ.
ಇವಿಷ್ಟೇ ಅಲ್ಲದೆ ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ಆಹಾರದ ನೆರವನ್ನೂ ಕೇಂದ್ರ ಸರ್ಕಾರ ನೀಡಿದ್ದು, ಎಪ್ರಿಲ್ನಲ್ಲಿ ದೇಶದ 60.33 ಕೋಟಿ ಗಳಷ್ಟು ಫಲಾನುಭವಿಗಳು ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಮೇ ತಿಂಗಳಿನಲ್ಲಿ 12.39 ಕೋಟಿ ಜನರು ಇದರ ಉಪಯೋಗವನ್ನು ಪಡೆದಿದ್ದಾರೆ. ಜೊತೆಗೆ 5.21 ಕೋಟಿ ಬಡ ಜನರಿಗೆ ದ್ವಿದಳ ಧಾನ್ಯಗಳನ್ನು ವಿತರಿಸಿರುವುದಾಗಿಯೂ ಕೇಂದ್ರ ಸರ್ಕಾರ ವರದಿ ನೀಡಿದೆ. 4.82 ಕೋಟಿ ಜನರು ಉಚಿತವಾಗಿ ಅಡುಗೆ ಅನಿಲಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸುಮಾರು 9.6 ಲಕ್ಷ ಉದ್ಯೋಗಿಗಳು 2985 ಕೋಟಿ ರೂ. ಗಳ ಇಪಿಎಫ್ಒ ಹಿಂಪಡೆದುಕೊಂಡಿರುವುದಾಗಿಯೂ ಕೇಂದ್ರ ತಿಳಿಸಿದೆ.
ಆ ಮೂಲಕ ಲಾಕ್ಡೌನ್ ಸಂದರ್ಭದಲ್ಲಿ ಬಡಜನರನ್ನು ಸಂರಕ್ಷಣೆ ಮಾಡುವ ಎಲ್ಲಾ ಕೆಲಸಗಳನ್ನೂ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಮಾಡಿದ್ದು ಜನರನ್ನೂ ಕೊಂಚ ಮಟ್ಟಿಗೆ ಆರ್ಥಿಕ ಸಬಲರನ್ನಾಗಿಸುವಲ್ಲಿ ಸಹಾಯ ಮಾಡಿದೆ ಎಂದೇ ಹೇಳಬಹುದಾಗಿದೆ.
Around 39 cr poor people received financial assistance of Rs 34,800 cr (as on 05.05.2020) under #PradhanMantriGaribKalyanPackage.
Robust Digital payment infrastructure set up by Govt has enabled prompt transfer of cash payment under PMGKP.Read more➡️https://t.co/NbM9gU05gt pic.twitter.com/qPFOf7Mx5D
— Ministry of Finance 🇮🇳 #StayHome #StaySafe (@FinMinIndia) May 6, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.