ನವದೆಹಲಿ: ಕೊರೋನಾ ವೈರಸ್ ಹರಡದಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವರೆಗೆ ಲಾಕ್ಡೌನ್ ಸೇರಿದಂತೆ ಇನ್ನೂ ಅನೇಕ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ. ಆ ಮೂಲಕ ದೇಶ ವಾಸಿಗಳ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದೆ.
ಕೊರೋನಾ ತಡೆಗಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಕೈಗೊಂಡ ಕ್ರಮಗಳು ಔಚಿತ್ಯಪೂರ್ಣವಾಗಿದ್ದವೇ ಎಂಬುದರ ಕುರಿತಂತೆ ಬಹುರಾಷ್ಟ್ರೀಯ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಇಪ್ಸೋಸ್ ಎ. 23-26 ರ ವರಗೆ ಸಮೀಕ್ಷೆ ನಡೆಸಿದ್ದು, ದೇಶದ 87% ನಗರವಾಸಿ ಜನರು ಮೋದಿ ತೆಗೆದುಕೊಂಡ ಸಮಯೋಚಿತ ನಿರ್ಧಾರಗಳಿಗೆ ಬಹುಪರಾಕ್ ಎಂದಿದ್ದಾರೆ. ಆ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮಯ ಪ್ರಜ್ಞೆ ಮೆರೆದಿದೆ ಎಂದು ಜನರು ಒಪ್ಪಿಕೊಂಡಿದ್ದಾರೆ.
ಕೊರೋನಾ ವೈರಸ್ ಹೆಚ್ಚು ವ್ಯಾಪಿಸದಂತೆ ಕೇಂದ್ರ ಸರ್ಕಾರ ದೇಶದ ಆರ್ಥಿಕತೆಗಿಂತ ಜನರ ಆರೋಗ್ಯ ಹೆಚ್ಚು ಮುಖ್ಯ ಎಂಬುದನ್ನು ಮನಗಂಡು ಲಾಕ್ಡೌನ್ ಕ್ರಮ ಅನುಸರಿಸಿದೆ. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್ ಬಳಕೆಗೆ ಸೂಚನೆ, ಗುಂಪು ಸೇರದಿರುವುದು ಸೇರಿದಂತೆ ಆರೋಗ್ಯ ಸೇತು ಆ್ಯಪ್ನ ಮೂಲಕವೂ ಜನರ ಆರೋಗ್ಯ ಕಾಳಜಿ ವಹಿಸಿತ್ತು. ಜೊತೆಗೆ ದೇಶಕ್ಕೆ ಬೇಕಾದ ಅಗತ್ಯ ವಸ್ತುಗಳ ಪೂರೈಕೆಯನ್ನೂ ಮಾಡುವ ಮೂಲಕ ಕೊರೋನಾ ದಿಂದ ಜನರಿಗೆ ಹೆಚ್ಚಿನ ಮಟ್ಟದಲ್ಲಿ ತೊಂದರೆಯಾಗದಂತೆಯೂ ಎಚ್ಚರ ವಹಿಸಿತ್ತು.
ಅನಂತರದಲ್ಲಿ ಕೊರೋನಾ ಗ್ರೀನ್ ಝೋನ್ಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡುವ ಮೂಲಕ ದೇಶವನ್ನು ಕಾಪಾಡಲು ಹೊರಟ ಮೋದಿ ಕ್ರಮ ಇದೀಗ ದೇಶವಾಸಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.