ನವದೆಹಲಿ: ಕೊರೋನಾ ಸಂಕಷ್ಟದಿಂದ ಹಿಮಾಚಲ ಪ್ರದೇಶದಲ್ಲಿ ನಡೆಸುತ್ತಿದ್ದ ಅಟಲ್ ಟನಲ್ ಯೋಜನೆಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇದೀಗ ಸರ್ಕಾರದ ಅನುಮತಿ ಪಡೆದು ಮತ್ತೆ ಆರಂಭಿಸಲಾಗಿದೆ. ಮುಂದಿನ ಸೆಪ್ಟೆಂಬರ್ ತಿಂಗಳಿನೊಳಗಾಗಿ ಈ ಕಾರ್ಯವನ್ನು ಸಂಪೂರ್ಣಗೊಳಿಸಲಾಗುವುದಾಗಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್(BRO) ಮಾಹಿತಿ ನೀಡಿದೆ.
ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿಗಾಗಿ ಅಟಲ್ ಟನಲ್ ಯೋಜನೆ ಎಂದೇ ಕರೆಯಲಾಗುತ್ತಿದ್ದು, ಈ ಯೋಜನೆಯನ್ನು ಹಿಮಾಚಲ ಪ್ರದೇಶದ ರೋಹ್ಟಗಿಯಲ್ಲಿ ಆರಂಭಿಸಲಾಗಿತ್ತು. ಆದರೆ ದೇಶದೆಲ್ಲೆಡೆ ಕೊರೋನಾ ರುದ್ರನರ್ತನ ನಡೆಸುತ್ತಿದ್ದ ಕಾರಣ ಕಳೆದ ಹತ್ತು ದಿನಗಳಿಂದ ಇಲ್ಲಿ ಕೆಲಸಗಳನ್ನು ನಿಲ್ಲಿಸಲಾಗಿದೆ ಎಂದು BRO ಮಾಹಿತಿ ನೀಡಿದ್ದು, ಇದೀಗ ಸರ್ಕಾರದ ಅನುಮತಿಯೊಂದಿಗೆ ಮತ್ತೆ ಆರಂಭ ಮಾಡಲಾಗಿದೆ ಎಂದೂ ತಿಳಿಸಿದೆ.
ಅಲ್ಲದೆ ಸುರಂಗ ನಿರ್ಮಾಣದ ಹಂತದಲ್ಲಿದ್ದು, ಇದರಲ್ಲಿ ಬೆಳಕು, ಇಂಟಲಿಜೆಂಟ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಎಲೆಕ್ಟ್ರೋ ಮೆಕ್ಯಾನಿಕ್ ಸಿಸ್ಟಂಗಳನ್ನೂ ಸುರಂಗದಲ್ಲಿ ಅಳವಡಿಸಲಿದ್ದು, ಈ ಕಾರ್ಯಗಳು ನಡೆಯುತ್ತಿವೆ ಎಂದು ಸಂಸ್ಥೆ ತಿಳಿಸಿದೆ. ರಸ್ತೆಯ ಮೇಲ್ಮೈ ಕೆಲಸಗಳನ್ನೂ ಆರಂಭ ಮಾಡಲಾಗಿದ್ದು ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳಿಸುವ ಭರವಸೆಯನ್ನೂ ನೀಡಿದೆ.
ಈ ಸುರಂಗವನ್ನು ಫಿರ್ಪಂಜಾಲ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದು, ಇದರಿಂದ ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 50 ಕಿ.ಮೀ. ಗಳಷ್ಟು ಕಡಿಮೆ ಮಾಡಲಿರುವುದಾಗಿಯೂ ಸಂಸ್ಥೆ ತಿಳಿಸಿದೆ. ಅಲ್ಲದೆ ಎಲ್ಲಾ ಹವಾಮಾನಗಳಲ್ಲಿಯೂ ಹಿಮಾಚಲ ಮತ್ತು ಲಡಾಕ್ ಗಡಿಗಳಿಗೆ ಸಂಪರ್ಕ ಒದಗಿಸಲಿದೆ ಎಂದು ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.