ನವದೆಹಲಿ: ವಿಶ್ವಾದ್ಯಂತ ಕೊರೋನಾ ಸೋಂಕು ಹರಡುವಂತೆ ಮಾಡಿ ಜಗತ್ತಿನ ವಿಶ್ವಾಸ ಕಳೆದುಕೊಂಡಿರುವ ಚೀನಾವನ್ನು ಬಿಟ್ಟು ತಮ್ಮ ಕಂಪನಿಗಳನ್ನು ಬೇರೆಡೆ ಸ್ಥಾಪಿಸಲು ಹಲವು ದೇಶಗಳು ಕಸರತ್ತು ನಡೆಸುತ್ತಿವೆ. ಇಂತಹ ಕಂಪನಿಗಳಿಗೆ ಭಾರತದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಭೂಮಿ ಸಿದ್ಧಪಡಿಸಿಕೊಳ್ಳುವ ಸಲುವಾಗಿ ಕೆಲಸ ಮಾಡುತ್ತಿದೆ.
ವಿದೇಶೀ ಕಂಪನಿಗಳಿಗೆ ಭಾರತೀಯ ನೆಲದಲ್ಲಿ ಅವಕಾಶ ನೀಡುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದ್ದು, ಅದಕ್ಕಾಗಿ ಜಾಗತಿಕ ಕಂಪನಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಭೂಮಿ ಗುರುತಿಸಲು ಮುಂದಾಗಿದೆ. ಅಂದಾಜಿನಂತೆ ಕೇಂದ್ರ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಸುಮಾರು 4,61,589 ಹೆಕ್ಟೇರ್ ಗಳಷ್ಟು ಭೂಮಿಯನ್ನು ಗುರುತಿಸಿದ್ದು, ಮಾತುಕತೆ ನಡೆಸಿರುವುದಾಗಿಯೂ ಹೇಳಲಾಗುತ್ತಿದೆ. ಇದು ಸಿಂಗಾಪುರ ಕಅಕಿಂತ ಏಳು ಪಟ್ಟು ಅಧಿಕವಾಗಿದೆ ಎಂಬ ಮಾಹಿತಿಗಳೂ ಲಭ್ಯವಾಗಿದೆ.
ಈಗಾಗಲೇ ಅಮೆರಿಕ, ಜಪಾನ್ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳು ಚೀನಾ ತೊರೆಯುವ ನಿರ್ಧಾರ ಮಾಡಿವೆ. ಅಲ್ಲಿನ ಕಂಪನಿಗಳನ್ನು ಭಾರತದಲ್ಲಿ ಸ್ಥಾಪಿಸುವಂತೆ ಮಾಡುವ ಸಲುವಾಗಿ ಮತ್ತು ಅನಿವಾರ್ಯ ಸಂದರ್ಭದಲ್ಲಿ ಭೂಮಿಯ ಕೊರತೆ ಬಾರದಂತೆ ಎಚ್ಚರಿಕೆ ವಹಿಸಲು ಕೇಂದ್ರ ಸರ್ಕಾರ ಈಗಾಗಲೇ ಈ ಕ್ರಮವನ್ನು ಕೈಗೊಂಡಿದೆ. ಗುಜರಾತ್, ಆಂಧ್ರ, ತಮಿಳುನಾಡುಗಳಲ್ಲಿ ಕೇಂದ್ರ ಸರ್ಕಾರ ಭೂಮಿಯನ್ನು ನೋಡಿಟ್ಟಿದೆ ಎಂದೂ ಹೇಳಲಾಗುತ್ತಿದೆ.
ಇನ್ನು ಚೀನಾ ತೊರೆಯುವ ಕಂಪನಿಗಳು ಭಾರತದಲ್ಲಿ ಸ್ಥಾಪಿತವಾಗುವಂತೆ ಮಾಡುವುದಕ್ಕೆ ಬೇಕಾಗಿ ಕೇಂದ್ರ ಸರ್ಕಾರ ಈ ಹಿಂದೆ ಅಧಿಕಾರಿಗಳ ಜೊತೆಗೂ ಸಭೆ ನಡೆಸಿತ್ತು. ಅಲ್ಲದೆ ಅದಕ್ಕೆ ಪೂರಕ ಎಂಬಂತೆ ಹಲವು ರಾಜ್ಯಗಳಿಗೆ ಸಹಾಯಹಸ್ತವನ್ನೂ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.