ನವದೆಹಲಿ : ಭಾರತೀಯ ಪರಂಪರೆಯ ಬಗ್ಗೆ ಭಾರತೀಯರೇ ಹೆಚ್ಚು ಉತ್ಸಾಹ ತೋರದ ಸಂದರ್ಭದಲ್ಲಿ, ಬ್ರೆಜಿಲ್ನ ಗ್ಲೋರಿಯಾ ಅರೈರಾ ಎಂಬ ಮಹಿಳೆ ಇಲ್ಲಿನ ಸಂಸ್ಕೃತಿಯನ್ನು ಕಲಿತು, ವಿದೇಶದಲ್ಲಿಯೂ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಭಗವದ್ಗೀತೆಯನ್ನು ರಾಷ್ಟ್ರೀಯ ಸಂಪತ್ತು (NATIONAL TREASURE) ಎಂದು ಘೋಷಿಸುವಂತೆಯೂ ಮನವಿ ಮಾಡಿದ್ದಾರೆ. ಬದುಕಿಗೆ ಬೇಕಾದ ಸಂದೇಶ ತಿಳಿಸುವ ಗೀತೆಯನ್ನು ಮುಂದೊಮ್ಮೆ ವಿಶ್ವವೇ ಅಳವಡಿಸಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಸಂಸ್ಕೃತ ಕಲಿಕೆ ಮತ್ತು ವೇದಾಂತ ಸಾಹಿತ್ಯದಲ್ಲಿ ಸಾಧನೆ ಮೆರೆದ ಗ್ಲೋರಿಯಾ ಅವರಿಗೆ 2020 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರವನ್ನೂ ನೀಡಿ ಗೌರವಿಸಿದೆ. ಇವರು ಭಗವದ್ಗೀತೆಯನ್ನು ಪೋರ್ಚುಗೀಸ್ ಭಾಷೆಗೆ ಭಾಷಾಂತರ ಮಾಡಿ ಅದರ ಕಂಪನ್ನು ತಮ್ಮ ದೇಶದಲ್ಲಿಯೂ ಹರಡಿದ್ದಾರೆ.
ಇನ್ನು ತಮ್ಮ ಸ್ವದೇಶದ ರಿಯೋ ದೆ ಜುನೈರೋ ನದಿ ತೀರದ ಕೊಪಕಬನ ಪ್ರದೇಶದಲ್ಲಿ ಸಂಸ್ಕೃತ ಮತ್ತು ಭಾರತೀಯ ಸಂಸ್ಕೃತಿಯ ಭಾಗವಾದ ವೇದಗಳ ಅಧ್ಯಯನಕ್ಕೂ ಶಾಲೆಗಳನ್ನು ತೆರೆದು, ಅಲ್ಲಿ ಆಧ್ಯಾತ್ಮಿಕ ಕಂಪನ್ನು ಪಸರಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೆ ತಮ್ಮ ದಿನ ನಿತ್ಯದ ಜೀವನದಲ್ಲಿಯೂ ಭಾರತೀಯ ಜೀವನ ಪದ್ಧತಿಯನ್ನೇ ಅಳವಡಿಸಿಕೊಂಡಿರುವ ಇವರು, ಅಲ್ಲಿನ ಅದೆಷ್ಟೋ ವಿದ್ಯಾರ್ಥಿಗಳಲ್ಲಿಯೂ ಭಾರತದ ಉನ್ನತ ಸಂಸ್ಕೃತಿ ಪಸರಿಸುವ ಕೆಲಸ ಮಾಡುತ್ತಿದ್ದು, ಇವರ ಈ ಕಾರ್ಯ ಮಾದರಿ ಎಂದೇ ಹೇಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.