ಕೋಝಿಕ್ಕೋಡ್ : ಸಾಧಿಸುವ ಛಲವಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯನ್ನು ಮೆಟ್ಟಿನಿಂತು ಸಾಧಿಸಬಹುದು ಎಂಬುದಕ್ಕೆ ಕೇರಳದ ಈ ವನವಾಸಿ ಹೆಣ್ಣುಮಗಳೇ ಸಾಕ್ಷಿ. ಬಡತನದ ಬೇಗೆಯಲ್ಲಿ ಬೆಂದು ಈಕೆ ಇಂದು ಅಸಿಸ್ಟೆಂಟ್ ಕಲೆಕ್ಟರ್ ಆಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ.
ಕೇರಳದ ಕೋಝಿಕ್ಕೋಡ್ನ ಅಸಿಸ್ಟೆಂಟ್ ಕಲೆಕ್ಟರ್ ಆಗಿ 26 ವರ್ಷದ ಬುಡಕಟ್ಟು ಹೆಣ್ಣುಮಗಳು ಶ್ರೀಧನ್ಯ ಸುರೇಶ್ ನೇಮಕವಾಗಿದ್ದಾಳೆ. ಪ್ರಸ್ತುತ ಈಕೆ ತರಬೇತಿ ಹಂತದಲ್ಲಿದ್ದಾಳೆ.
ವಯನಾಡಿನ ಪೊಝುತನ ಪಂಚಾಯತ್ ಪ್ರದೇಶದ ನಿವಾಸಿಯಾಗಿರುವ ಶ್ರೀಧನ್ಯ ಕುರಿಚಿಯಾ ಸಮುದಾಯಕ್ಕೆ ಸೇರಿದವಳು. ಹಲವು ಕಷ್ಟಗಳ ನಡುವೆಯೇ ಈಕೆ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದಾಳೆ. ಸಿವಿಲ್ ಸರ್ವಿಸ್ ಎಕ್ಸಾಮ್ನಲ್ಲಿ ಈಕೆ ರಾಷ್ಟ್ರೀಯ ರ್ಯಾಂಕ್ 410 ಅನ್ನು ಗಳಿಸಿದ್ದಾಳೆ.
ಮುಸೂರಿಯಲ್ಲಿ ಪ್ರಸ್ತುತ ತರಬೇತಿಯನ್ನು ಪಡೆಯುತ್ತಿರುವ ಈಕೆ, ಅಸಿಸ್ಟೆಂಟ್ ಕಲೆಕ್ಟರ್ ಆಗಿ ಪದಗ್ರಹಣ ಮಾಡುವುದಕ್ಕೂ ಮುನ್ನ ಎರಡು ವಾರಗಳ ಕ್ವಾರಂಟೈನ್ಗೆ ಒಳಪಡುವುದು ಕಡ್ಡಾಯವಾಗಿದೆ.
ಬಾಲ್ಯದಲ್ಲಿ ಸಬ್ ಕಲೆಕ್ಟರ್ ಅವರ ಜೊತೆ ಸಂವಾದ ನಡೆಸಿದ ಶ್ರೀಧನ್ಯಾಗೆ ಆಗಿನಿಂದ ಕಲೆಕ್ಟರ್ ಆಗಬೇಕೆಂಬ ಮಹದಾಸೆ ಚಿಗುರೊಡೆಯಿತು. ತನ್ನ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಈಕೆ ಅವಿರತವಾಗಿ ಪರಿಶ್ರಮ ಪಟ್ಟಿದ್ದಾಳೆ.
ಈಕೆಯ ತಂದೆ ಸುರೇಶ್ ಮತ್ತು ತಾಯಿ ಕಮಲ ಅವರು ದಿನಗೂಲಿ ಕಾರ್ಮಿಕರಾಗಿದ್ದು, ಮನ್ರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಈಕೆಯ ಅಕ್ಕ ಲಾಸ್ಟ್ ಗ್ರೇಡ್ ಸರಕಾರಿ ಉದ್ಯೋಗಿಯಾಗಿದ್ದಾರೆ ಮತ್ತು ತಮ್ಮ ಪಾಲಿಟೆಕ್ನಿಕ್ ವಿದ್ಯಾರ್ಥಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.