ನವದೆಹಲಿ : ‘ಮೈ ಭಾರತ್ ಪೈಂಟ್’ ಇದೊಂದು ಆನ್ಲೈನ್ ಚಿತ್ರ ಸ್ಪರ್ಧೆ. ಬ್ಯಾಕ್ ಟು ಯುವರ್ ರೂಟ್ ಎಂಬ ಸಂಸ್ಥೆ 5-15 ವರ್ಷದ ಒಳಗಿನ ಮಕ್ಕಳಿಗಾಗಿ ಏರ್ಪಡಿಸಿದ ಮೈ ಭಾರತ್ ಪೈಂಟ್ ಚಿತ್ರ ಸ್ಪರ್ಧೆ. ಈ ಚಿತ್ರಸ್ಪರ್ಧೆಯಲ್ಲಿ ಇಡೀ ದೇಶದ ಶ್ರೀಮಂತ ಸಂಸ್ಕೃತಿ ಅನಾವರಣವಾಗಿದೆ ಎಂದರೆ ಎಂತಹವರಿಗೂ ಆಶ್ಚರ್ಯ ಸಹಜ. ಆದರೆ ಅದು ಸತ್ಯ.
ದೇಶದ ವಿವಿಧ ಭಾಗಗಳಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ರಾಮ, ಕೃಷ್ಣ, ಶಿವ, ಗಣೇಶ ಮೊದಲಾದ ದೇವರುಗಳ ಚಿತ್ರಗಳನ್ನು ರಚಿಸಿ ಅವುಗಳನ್ನು ಸ್ಪರ್ಧೆಗೆ ಕಳುಹಿಸಿಕೊಡುವ ಮೂಲಕವೇ ಭಾರತದ ಭವ್ಯ ಸಂಸ್ಕೃತಿ ಇನ್ನೂ ಜೀವಂತವಾಗಿ ಉಳಿದಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಅಲ್ಲದೆ ಕೃಷ್ಣಲೀಲಾ, ರಾಮಾಯಣ, ಶಿವಾಜಿ, ಸುಭಾಷ್ ಚಂದ್ರ ಬೋಸ್, ಮಹಾರಾಣಾ ಪ್ರತಾಪ್ ಮೊದಲಾದವರ ಚಿತ್ರಗಳನ್ನು ರಚಿಸಿ ಅವುಗಳಿಗೆ ಬಣ್ಣ ತುಂಬುವ ಮೂಲಕ ಭಾರತದ ಇತಿಹಾಸದ ಬಗೆಗೂ ಬೆಳಕು ಚೆಲ್ಲಿದ್ದಾರೆ.
ಇನ್ನು ಈ ಸ್ಪರ್ಧೆಯನ್ನು ಆಯೋಜಿಸಿರುವ ಉದ್ದೇಶವನ್ನೂ ತಿಳಿಸಿರುವ ಆಯೋಜಕರು, ಮುಂದಿನ ಜನಾಂಗಕ್ಕೆ ಈ ದೇಶದ ಮೇರು ಪರಂಪರೆ, ಇತಿಹಾಸ, ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುವ ದೃಷ್ಟಿಯಿಂದ ಮಕ್ಕಳನ್ನು ಕೇಂದ್ರೀಕರಿಸಿ ಈ ಚಟುವಟಿಕೆ ಏರ್ಪಡಿಸಿದ್ದಾಗಿ ತಿಳಿಸಿದ್ದಾರೆ. ಕೇವಲ ಇದಷ್ಟೇ ಅಲ್ಲದೆ ಇನ್ನಿತರ ಅರ್ಥಪೂರ್ಣ, ಮಾದರಿ ಚಟುವಟಿಕೆಗಳನ್ನು, ಯೋಜನೆಗಳನ್ನು ಆಯೋಜನೆ ಮಾಡುವ ಮೂಲಕವೇ ಈ ಸಂಸ್ಥೆ ಹೆಚ್ಚು ಜನರಿಗೆ ಹತ್ತಿರವಾಗಿದೆ ಎನ್ನಬಹುದು.
“Back To Your Roots” is organizing Online Painting for 5-15 yrs old children.
Post your painting with Hastag #MyBharatPaint
Along with Child Name/Age on Twitter, FB & Instagram. Participants will get Digital Certificate from #BackToYourRoots pic.twitter.com/VCMlSpHSr4— Back To Your Roots (@Bck2YurRoots) April 1, 2020
ಕೇವಲ 13 ವರ್ಷದ ಪ್ರಿಯಲ್ ಸಿಂಗ್ ಎಂಬ ಪುಟಾಣಿ ರಾಮ ಸೇತುವಿನ ಕಥೆಯನ್ನು ಸಾರುವ ಅದ್ಭುತ ಪೈಂಟಿಂಗ್ ಅನ್ನು ರಚಿಸಿದ್ದಾರೆ. ಶ್ರೀ ರಾಮ ಕಲ್ಲಿನ ಮೇಲೆ ಕುಳಿತಂತೆ, ಹನುಮ ತನ್ನ ವಾನರ ಸೇನೆಯ ಜೊತೆಗೆ ಸೇರಿಕೊಂಡು ಲಂಕೆಗೆ ಸೇರಲು ರಾಮ ಸೇತು ನಿರ್ಮಿಸುವ ಭಂಗಿಗಳಲ್ಲಿ ಈ ಚಿತ್ರವಿದೆ. ಈ ಚಿತ್ರದ ಘಟನೆಗಳನ್ನು ಪುಟಾಣಿ ದೂರದರ್ಶನ ಪ್ರಸಾರ ಮಾಡುತ್ತಿರುವ ರಾಮಾಯಣ ಧಾರಾವಾಹಿ ಯಿಂದ ಹೆಕಅಕೆಕೊಂಡಂತಿದ್ದು, ನಮ್ಮ ದೇಶದ ಭವ್ಯ ಪರಂಪರೆ, ಭವ್ಯ ಭವಿಷ್ಯಗಳಾದ ಮಕ್ಕಳ ದೃಷ್ಟಿಯಲ್ಲಿ ಹೇಗೆ ಅಚ್ಚೊತ್ತುತ್ತಿದೆ ಎಂಬುದನ್ನು ಸಾಕ್ಷೀಕರಿಸಿದಂತಿದೆ. ಈ ಚಿತ್ರದ ಜೊತೆಗೆ ರಾಮಾಯಣದ ಮತ್ತೊಂದು ಪಾತ್ರ ಶಬರಿಯನ್ನೂ ತನ್ನ ಕಲ್ಪನೆಗೆ ತಂದು ಬಿಡಿಸಿ, ಬಣ್ಣ ತುಂಬುವ ಮೂಲಕ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾನೆ. ಇನ್ನು ಭುವನೇಶ್ವರಿ ಭೇಲ್ ಎಂಬ ಪುಟಾಣಿ ರಾಮಾಯಣದ ಇನ್ನೊಂದು ಸನ್ನಿವೇಶವಾದ ಅಶೋಕವನದಲ್ಲಿ ಹನುಮ ಸೀತೆಯ ಜೊತೆ ಮಾತನಾಡುವ ದೃಶ್ಯವನ್ನು ಮನೋಜ್ಞವಾಗಿ ಚಿತ್ರಿಸಿದ್ದಾಳೆ. ಆರಾಧ್ಯ ಕುಮಾರಿ ಎಂಬ ಪುಟಾಣಿ ಶ್ರೀ ಕೃಷ್ಣ ಒಂದು ಕೈಯಲ್ಲಿ ಬೆಣ್ಣೆ ತಿನ್ನುತ್ತಾ ಮತ್ತೊಂದು ಕೈಯಲ್ಲಿ ಕೊಳಲು ಹಿಡಿದಿರುವ ಚಿತ್ರವನ್ನು ಈ ಸ್ಪರ್ಧೆಗೆ ಕಳುಹಿಸಿದ್ದಾಳೆ. ಇಷ್ಟೇ ಅಲ್ಲದೆ ಇದರಲ್ಲಿ ಭಾಗವಹಿಸಿದ ಪುಟಾಣಿಗಳು ಮಾತೆ ಸರಸ್ವತಿ, ಗಣಪತಿ ಮೊದಲಾದ ಚಿತ್ರಗಳನ್ನು ರಚಿಸುವ ಮೂಲಕ ಈ ಸ್ಪರ್ಧೆಗೆ ಹೆಚ್ಚಿನ ಯಶ ತಂದುಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.