ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಅಲಿಪ್ತ ಚಳವಳಿಯ (ಎನ್ಎಎಂ) ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಮೊದಲ ಬಾರಿಗೆ ಈ ಸಭೆಯಲ್ಲಿ ಅವರು ಭಾಗವಹಿಸುತ್ತಿದ್ದು, ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಮಾರ್ಗಗಳ ಬಗ್ಗೆ ಚರ್ಚಿಸಲಿದ್ದಾರೆ.
ಈ ಸಭೆ ಭಾರತೀಯ ಸಮಯ ಸಂಜೆ 4.30 ರ ಸುಮಾರಿಗೆ ನಡೆಯಲಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಕೂಡ ಭಾಗವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
2014 ರಲ್ಲಿ ಪ್ರಧಾನ ಮಂತ್ರಿಯಾದ ನಂತರ ಮೋದಿಯವರು NAM ಸಭೆಯಲ್ಲಿ ಭಾಗವಹಿಸುವುದು ಇದೇ ಮೊದಲು. 2016 ರಲ್ಲಿ ಮತ್ತು 2019 ರಲ್ಲಿ NAM ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿರಲಿಲ್ಲ.
2016 ರಲ್ಲಿ ವೆನೆಜುವೆಲಾದಲ್ಲಿ ಮತ್ತು 2019 ರಲ್ಲಿ ಅಜೆರ್ಬೈಜಾನ್ನಲ್ಲಿ ನಡೆದ ಕೊನೆಯ ಎರಡು ಶೃಂಗಸಭೆಗಳಲ್ಲಿ ಭಾರತವನ್ನು ಉಪ ರಾಷ್ಟ್ರಪತಿ ಪ್ರತಿನಿಧಿಸಿದ್ದರು. ಮನಮೋಹನ್ ಸಿಂಗ್ ಅವರು 2012 ರಲ್ಲಿ ನಡೆದ ಟೆಹ್ರಾನ್ NAM ಮೀಟ್ನಲ್ಲಿ ಭಾಗವಹಿಸಿದ್ದರು.
ಅಜರ್ಬೈಜಾನ್ 2022 ರವರೆಗೆ ಗುಂಪಿನ ಅಧ್ಯಕ್ಷನಾಗಿದ್ದಾರೆ, ಅದರ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರ ನೇತೃತ್ವದಲ್ಲಿ ಸಭೆ ಆಯೋಜಿಸಲಾಗುತ್ತಿದೆ.
ಜಿ 20, ಬ್ರಿಕ್ಸ್ ಮತ್ತು ಸಾರ್ಕ್ನಂತಹ ಪ್ರಾದೇಶಿಕ ಗುಂಪುಗಳು ಕರೋನವೈರಸ್ ರೋಗವನ್ನು ನಿಭಾಯಿಸಲು ಸಂಘಟಿತ ವಿಧಾನವನ್ನು ಚರ್ಚಿಸಲು ವಿಡಿಯೋ ಕಾನ್ಫರೆನ್ಸ್ಗಳನ್ನು ನಡೆಸುತ್ತಿದೆ. ಕೊರೋನಾ ವಿಶ್ವದಾದ್ಯಂತ 3.5 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿದೆ ಮತ್ತು 274,431 ಜನರನ್ನು ಬಲಿಪಡೆದುಕೊಂಡಿದೆ.
NAM ವಿಶ್ವಸಂಸ್ಥೆಯ ಹೊರಗಿನ ದೇಶಗಳ ಅತಿದೊಡ್ಡ ಗುಂಪನ್ನು ಪ್ರತಿನಿಧಿಸುತ್ತದೆ ಮತ್ತು ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಿಂದ 120 ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಇದರ ಭಾಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.