ನವದೆಹಲಿ: ಕೊರೋನಾವೈರಸ್ ಎಂಬ ಮಹಾ ಸಾಂಕ್ರಮಿಕ ರೋಗದ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟವನ್ನು ನಡೆಸುತ್ತಿರುವ ಎಲ್ಲಾ ಕೊರೋನಾ ಯೋಧರಿಗೂ ಮೇ 3 ರಂದು ಗೌರವಾರ್ಪಣೆ ಮಾಡಲು ಭಾರತೀಯ ಸೇನೆ ನಿರ್ಧರಿಸಿದೆ. ಸೇನೆಯ ಈ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನೆಯು ಕೊರೋನಾ ಯೋಧರಿಗೆ ಫೈಟರ್ಗಳ ಮೂಲಕ ಫ್ಲೈಫಾಸ್ಟ್ ಮತ್ತು ಭಾರತೀಯ ವಾಯುಸೇನೆಯ ಯುದ್ಧವಿಮಾನವನ್ನು ಶ್ರೀನಗರದಿಂದ ತಿರುವನಂತಪುರಂಗೆ, ದಿಬ್ರುಗಢದಿಂದ ಕಚ್ಛ್ಗೆ ಟ್ರಾನ್ಸ್ಪೋರ್ಟ್ ಮಾಡಲಿದೆ.
ಕೊರೋನಾ ರೋಗಿಗಳನ್ನು ಆರೈಕೆ ಮಾಡುತ್ತಿರುವ ಆಸ್ಪತ್ರೆಗಳ ಮೇಲೆ ವಿಮಾನಗಳಿಂದ ಹೂಗಳನ್ನು ಕೊರೋನಾ ಯೋಧರಿಗಾಗಿ ಸುರಿಸಲಿದೆ. ನೌಕಾಸೇನೆ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ಕೂಡ ಗೌರವಾರ್ಥವಾಗಿ ಹಲವು ಕಾರ್ಯಗಳನ್ನು ಮಾಡಲಿದೆ. ಆರ್ಮಿ ಬ್ಯಾಂಡ್ ಕೋವಿಡ್ ಆಸ್ಪತ್ರೆಗಳಿಗೆ ತೆರಳಿ ವಾದ್ಯಗಳನ್ನು ನುಡಿಸಿ ಕೋವಿಡ್ ವಾರಿಯರ್ಸ್ಗೆ ಕೃತಜ್ಞತೆ ಅರ್ಪಣೆ ಮಾಡಲಿದೆ.
ರಕ್ಷಣಾ ಪಡೆಗಳ ಮುಖ್ಯಸ್ಥರು ಸೇನಾಪಡೆಯು ಕೊರೋನಾ ಯೋಧರಿಗೆ ಗೌರವಾರ್ಪಣೆ ಮಾಡುವ ವಿಷಯವನ್ನು ಶುಕ್ರವಾರ ಘೋಷಣೆ ಮಾಡಿದ್ದರು.
ಇಂದು ಮೂರು ಸೇನಾಪಡೆಗಳ ಮುಖ್ಯಸ್ಥರು ಪೊಲೀಸ್ ಸ್ಮಾರಕಕ್ಕೆ ತೆರಳಿ ಮಾಲಾರ್ಪಣೆ ಮಾಡಿ, ಪೊಲೀಸರಿಗೆ ಗೌರವ ಸೂಚಿಸಲಿದ್ದಾರೆ.
ಸೇನೆಯ ಈ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
“ರಕ್ಷಣಾ ಪಡೆಗಳ ಮುಖ್ಯಸ್ಥರು ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಕೊರೋನಾ ವಿರುದ್ಧ ಭಾರತ ಅತಿ ದೊಡ್ಡ ಹೋರಾಟವನ್ನೇ ನಡೆಸುತ್ತಿದೆ. ಮುಂಚೂಣಿ ಹೋರಾಟಗಾರರು ಕಾಳಜಿ ವಹಿಸುತ್ತಿದ್ದಾರೆ ಮತ್ತು ಹಲವರನ್ನು ಗುಣಪಡಿಸಿದ್ದಾರೆ. ಅವರು ನಿಜಕ್ಕೂ ಅತ್ಯದ್ಭುತ. ಭಾರತ ಅವರನ್ನು ಮತ್ತು ಅವರ ಕುಟುಂಬವನ್ನು ಶ್ಲಾಘಿಸುತ್ತದೆ.” ಎಂದಿದ್ದಾರೆ.
“ನಮ್ಮ ಸೇನಾಪಡೆಗಳು ನಮ್ಮ ರಾಷ್ಟ್ರವನ್ನು ಸದಾ ಸುರಕ್ಷಿತವಾಗಿಟ್ಟಿವೆ. ವಿಪತ್ತುಗಳ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಿವೆ. ಇದೀಗ ನಮ್ಮ ಪಡೆಗಳು ಕೊರೋನಾ ಯೋಧರಿಗೆ ಧನ್ಯವಾದವನ್ನು ಹೇಳಲು ವಿಭಿನ್ನ ಮಾರ್ಗವನ್ನು ಅನುಸರಿಸಿವೆ” ಎಂದಿದ್ದಾರೆ.
Our Armed Forces have always kept the nation safe. Even in times of disasters, they are out there helping people. Now, our Forces are, in a unique way, saying a big thank you to our frontline COVID-19 warriors for their endeavour towards making India COVID-19 free.
— Narendra Modi (@narendramodi) May 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.