ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಮೇ 17 ರ ವರೆಗೆ ಲಾಕ್ಡೌನ್ ಅನ್ನು ವಿಸ್ತರಣೆ ಮಾಡಿ ಶುಕ್ರವಾರ ಸಂಜೆ ಆದೇಶವನ್ನು ಹೊರಡಿಸಿದೆ. ಮೂರನೇ ಹಂತದ ಲಾಕ್ಡೌನ್ಗೆ ಗೃಹ ವ್ಯವಹಾರಗಳ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದರ ಅಡಿಯಲ್ಲಿ ಎಲ್ಲಾ ದೇಶೀಯ ಮತ್ತು ಅಂತರರಾಷ್ಟ್ರೀಯ ವಾಯುಯಾನ, ರೈಲ್ವೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಸಾರ್ವಜನಿಕ ಸಾರಿಗೆಯ ರೈಲುಗಳು, ಮೆಟ್ರೋ ಮತ್ತು ಅಂತರರಾಜ್ಯ ಬಸ್ಗಳ ಸಂಚಾರವನ್ನು ಮೇ 17 ರ ವರೆಗೂ ನಿಷೇಧಿಸಲಾಗಿದೆ.
ಸರ್ಕಾರದ ಆದೇಶದ ಪ್ರಕಾರ, ಎಲ್ಲಾ ದೇಶೀಯ ಮತ್ತು ಅಂತರರಾಷ್ಟ್ರೀಯ ನಿಗದಿತ ವಿಮಾನ ಕಾರ್ಯಾಚರಣೆಗಳು 2020 ರ ಮೇ 17ರವರೆಗೂ ಸ್ಥಗಿತಗೊಳ್ಳಲಿದೆ. ಆದರೆ ಸರಕು ಕಾರ್ಯಾಚರಣೆ ಮತ್ತು ನಿರ್ದಿಷ್ಟ ಸೇವೆಯ ವಿಮಾನ ಕಾರ್ಯಾಚರಣೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.
“ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರನ್ನು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯೊಂದಿಗೆ ಸಂಪರ್ಕಿಸಲು ವಿನಂತಿಸಲಾಗಿದೆ. ನಿಮ್ಮ ಸಹಕಾರ ಮತ್ತು ತಾಳ್ಮೆಗೆ ನಮ್ಮ ಧನ್ಯವಾದಗಳು. ಉಂಟಾದ ಅನಾನುಕೂಲತೆ ತೀವ್ರವಾಗಿ ವಿಷಾದಿಸುತ್ತಿದ್ದೇವೆ. ಎಲ್ಲಾ ದೇಶೀಯ ಮತ್ತು ಅಂತರರಾಷ್ಟ್ರೀಯ ನಿಗದಿತ ವಿಮಾನ ಕಾರ್ಯಾಚರಣೆಗಳನ್ನು 17 ಮೇ 2020 ರವರೆಗೆ ಸ್ಥಗಿತಗೊಳಿಸಲಾಗಿದೆ” ಎನ್ನಲಾಗಿದೆ.
ವಿಮಾನಯಾನ ಸೇವೆಗಳ ಹೊರತಾಗಿ, ಪ್ರಯಾಣಿಕರ ರೈಲುಗಳ ರದ್ದತಿಯನ್ನು ಕೂಡ ಭಾರತೀಯ ರೈಲ್ವೆ ವಿಸ್ತರಿಸಿದೆ.
ರೈಲ್ವೆ ಸಚಿವಾಲಯದ ಪ್ರಕಾರ, “COVID-19 ರ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳ ಮುಂದುವರಿಕೆಯಲ್ಲಿ, ಭಾರತೀಯ ರೈಲ್ವೆಯಲ್ಲಿನ ಎಲ್ಲಾ ಪ್ರಯಾಣಿಕ ರೈಲು ಸೇವೆಗಳನ್ನು ರದ್ದುಪಡಿಸುವುದನ್ನು 2020 ಮೇ 17 ರವರೆಗೆ ವಿಸ್ತರಿಸಬೇಕೆಂದು ನಿರ್ಧರಿಸಲಾಗಿದೆ.”ಎಂದಿದೆ.
“ಆದರೂ, ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಇತರ ವ್ಯಕ್ತಿಗಳಿಗಾಗಿ ರಾಜ್ಯ ಸರ್ಕಾರಗಳು ಅಗತ್ಯವಿರುವಂತೆ ಶ್ರಮಿಕ್ ವಿಶೇಷ ರೈಲುಗಳನ್ನು ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಎಲ್ಲಿದೆ. ಸರಕು ಮತ್ತು ಪಾರ್ಸೆಲ್ ರೈಲುಗಳ ಕಾರ್ಯಾಚರಣೆ ಪ್ರಸ್ತುತದಂತೆ ಮುಂದುವರಿಯುತ್ತವೆ.
ಎಂಎಚ್ಎ ಅನುಮತಿ ನೀಡಿದ್ದನ್ನು ಹೊರತುಪಡಿಸಿ, ಸಾರ್ವಜನಿಕ ಸಾರಿಗೆಗಾಗಿ ಅಂತರರಾಜ್ಯ ಬಸ್ಗಳು ಮತ್ತು ಮೆಟ್ರೋ ಸೇವೆಗಳನ್ನು ನಿಷೇಧಿಸಲಾಗಿದೆ. ಮೇ 17 ರವರೆಗೆ ಲಾಕ್ಡೌನ್ ಅನ್ನು 14 ದಿನಗಳ ಕಾಲ ಮತ್ತೆ ವಿಸ್ತರಿಸುವುದಾಗಿ ಸಚಿವಾಲಯ ಘೋಷಿಸಿದ ನಂತರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಸಮಗ್ರ ಪರಿಶೀಲನೆಯ ನಂತರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಲಾಕ್ ಡೌನ್ ಕಾರಣದಿಂದಾಗಿಯೇ ಸಾಂಕ್ರಾಮಿಕ ರೋಗದ ಪರಿಸ್ಥಿತಿಯು ಭಾರತದಲ್ಲಿ ಕೈಮೀರಿಲಲ್ಲ ಎಂಬುದನ್ನು ಮನಗಂಡ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.