ನವದೆಹಲಿ: ತೆಲಂಗಾಣ ಮತ್ತು ಕೇರಳದಿಂದ ಸುಮಾರು 2000 ವಲಸಿಗರನ್ನು ಅವರ ತವರಿಗೆ ಕರೆದೊಯ್ಯಲು ವಿಶೇಷ ರೈಲು ವ್ಯವಸ್ಥೆಯನ್ನು ಮಾಡಲಾಗಿದೆ. ಮೊದಲ ವಿಶೇಷ ರೈಲು ತೆಲಂಗಾಣದಿಂದ ಈಗಾಗಲೇ ಹೊರಟಿದೆ. ಎರಡನೇ ರೈಲು ಕೇರಳದಿಂದ ಸಂಜೆ ವೇಳೆಗೆ ಹೊರಡಲಿದೆ.
ಮೊದಲ ವಿಶೇಷ ರೈಲು ಇಂದು ಬೆಳಗ್ಗೆ 4.30ಕ್ಕೆ ತೆಲಂಗಾಣವನ್ನು ತೊರೆದು ಜಾರ್ಖಂಡ್ಗೆ ಪ್ರಯಾಣಿಸಿದೆ. ಇದರಲ್ಲಿ ಸುಮಾರು 1200 ವಲಸಿಗರು ಇದ್ದಾರೆ. ಈ ರೈಲು ಜಾರ್ಖಂಡಿನ ಹಟಿಯ ಜಿಲ್ಲೆಗೆ ತೆರಳಲಿದೆ. 24 ಬೋಗಿಗಳ ಈ ರೈಲಿನಲ್ಲಿ ಸಾಮಾನ್ಯವಾಗಿ 72 ಜನರ ಕಂಪಾರ್ಟ್ಮೆಂಟ್ ಇದೆ. ಆದರೆ ಇದೀಗ ಸಾಮಾಜಿಕ ಅಂತರದ ನಿಯಮಕ್ಕೆ ಅನುಗುಣವಾಗಿ 54 ಜನರನ್ನು ಕೂರಿಸಿ ಅವರ ತವರಿಗೆ ಕರೆದೊಯ್ಯಲಾಗುತ್ತಿದೆ. ಎಲ್ಲಾ ಪ್ರಯಾಣಿಕರನ್ನು ಕೂಡ ರೈಲಿನಲ್ಲಿ ಕೂರಿಸುವ ಮೊದಲು ಪರೀಕ್ಷೆಗೆ ಒಳಪಡಿಸಲಾಗಿದೆ.
6:00 ಗಂಟೆಗೆ ಕೇರಳದ ಎರ್ನಾಕುಲಂನಿಂದ ಎರಡನೇ ವಿಶೇಷ ರೈಲು ಒರಿಸ್ಸಾದ ಭುವನೇಶ್ವರಕ್ಕೆ ತೆರಳಿದೆ. ರೈಲನ್ನು ಸಂಪೂರ್ಣವಾಗಿ ಸಾಂಕ್ರಾಮಿಕ ಮುಕ್ತಗೊಳಿಸಿದ ಬಳಿಕವಷ್ಟೇ ಅದರಲ್ಲಿ ಪ್ರಯಾಣಿಕರನ್ನು ಕೂರಿಸಲಾಗಿದೆ. ಕೂರಿಸುವಾಗಲು ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಕಾಯ್ದುಕೊಳ್ಳಲಾಗುತ್ತದೆ.
ಕೇಂದ್ರ ಸರಕಾರವು ಬುಧವಾರ ವಿವಿಧ ಭಾಗಗಳಲ್ಲಿ ಸಿಲುಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಅವರ ಮನೆಗಳಿಗೆ ತೆರಳಬಹುದು ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಎರಡು ವಿಶೇಷ ರೈಲುಗಳನ್ನು ಸಿದ್ಧಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.