ನವದೆಹಲಿ: ವಿಶ್ವಸಂಸ್ಥೆಯಲ್ಲಿನ ತಮ್ಮ ಅತ್ಯದ್ಭುತ ಭಾಷಣದ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ಅವರು ನಿವೃತ್ತರಾಗಿದ್ದಾರೆ. ಕಛೇರಿಯಲ್ಲಿನ ತಮ್ಮ ಕೊನೆಯ ದಿನವನ್ನು ಅವರು ನಮಸ್ತೆ ಯೊಂದಿಗೆ ಮುಕ್ತಾಯಗೊಳಿಸಿದರು.
ಅಕ್ಬರುದ್ದೀನ್ ಅವರು ಗುರುವಾರ ತಾವು ಕೊನೆಯ ದಿನದಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯಾ ಗುಟೆರಸ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಿರುವ ಪೋಸ್ಟ್ ಅನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಗುಟೆರಸ್ ಅವರಿಗೆ ನಮಸ್ತೆ ಮಾಡುತ್ತಿರುವ ದೃಶ್ಯವಿದೆ.
“ಎಂದಿನಂತೆ ಇದು ತಲೆಬಾಗುವ ಸಮಯ” ಎಂದು ಬರೆದುಕೊಂಡಿರುವ ಅವರು, ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ನಮಸ್ತೆ ಮಾಡುತ್ತಿರುವ ಮತ್ತು ನಮಸ್ತೆಯ ಮಹತ್ವವನ್ನು ಸಾರುವ ಸಂದೇಶ ನೀಡಿದ್ದಾರೆ.
ಅಕ್ಬರುದ್ದೀನ್ ಅವರ ಸಂದೇಶಕ್ಕೆ ಗುಟೆರಸ್ ಅವರು ಮುಗುಳ್ನಕ್ಕು, ಪ್ರತಿ ನಮಸ್ತೆ ಮಾಡಿದ್ದಾರೆ.
ಅಕ್ಬರುದ್ದೀನ್ ಅವರು 1985 ಬ್ಯಾಚ್ ಇಂಡಿಯನ್ ಫಾರಿನ್ ಸರ್ವಿಸ್ ಅಧಿಕಾರಿಯಾಗಿದ್ದು, 2016ರ ಜನವರಿಯಿಂದ ಭಾರತದ ವಿಶ್ವಸಂಸ್ಥೆಯ ಖಾಯಂ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಅವರು ಸ್ಥಾನದಿಂದ ನಿವೃತ್ತಿಯಾಗಿದ್ದಾರೆ. ಅವರ ಸ್ಥಾನವನ್ನು ಟಿ.ಎಸ್ ತ್ರಿಮೂರ್ತಿ ಅವರು ಭರಿಸಲಿದ್ದಾರೆ. ಅವರು ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Time to bow out, with the usual🙏🏽 pic.twitter.com/BM6m7j7qQW
— Syed Akbaruddin (@AkbaruddinIndia) April 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.