ಮುಂಬೈ: ಶ್ರವಣ ದೋಷವುಳ್ಳವರಿಗೆ ಅರಿವಾಗುವಂತೆ, ಸಾಯಿ ಸ್ವಯಂ ಸೊಸೈಟಿಯ ಮಹಿಳೆಯೊಬ್ಬರು ಸಂಜ್ಞಾ ಭಾಷೆಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟ ಹೃದಯಸ್ಪರ್ಶಿ ‘ತೇರಿ ಮಿಟ್ಟಿ ಟ್ರಿಬ್ಯೂಟ್’ ವಿಡಿಯೋವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗೆ ಶ್ರಮ ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳ ಮೇಲಾಗುತ್ತಿರುವ ಹಲ್ಲೆ, ಕೊರೋನಾ ಹೋರಾಟದಲ್ಲಿ ವೈದ್ಯಕೀಯ ಸಿಬ್ಬಂದಿಗಳ ಶ್ರಮ, ಕೊರೋನಾ ನಂತರದ ಸ್ಥಿತಿಗತಿ ಮೊದಲಾದ ವಿಚಾರಗಳ ಬಗ್ಗೆ ಗಾಯಕ ಪ್ರಾಕ್ ತಿಳಿಸಿ ಕೊಡುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಕೊರೋನಾ ಸಂಕಷ್ಟ ಮುಗಿದ ಬಳಿಕ ಭಾರತ ಸೇರಿದಂತೆ ಇಡೀ ಜಗತ್ತು ಮತ್ತೆ ಯಥಾಸ್ಥಿತಿಗೆ ಬರಲಿದೆ ಎಂಬ ಆಶಾವಾದವನ್ನೂ ಈ ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ.
ಈ ಬಗ್ಗೆ ಬರೆದುಕೊಂಡಿರುವ ಅಕ್ಷಯ್, ಈ ವಿಡಿಯೋದಲ್ಲಿ ಭಾವನೆಗಳನ್ನು ಅತ್ಯುನ್ನತ ರೀತಿಯಲ್ಲಿ ಮೂಲ ಗಾಯಕ ಪ್ರಾಕ್ ಅವರು ಕಟ್ಟಿಕೊಟ್ಟಿದ್ದಾರೆ. ಇದು ಮನ ಮುಟ್ಟುವಂತಿದ್ದು, ಇದನ್ನು ಹಂಚಿಕೊಂಡಿರುವುದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Thank you so much for making and sharing this, brought out the sentiments in such a beautiful way ♥️ https://t.co/4yf4EOLA3u
— Akshay Kumar (@akshaykumar) April 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.