ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ವೆಂಟಿಲೇಟರ್ ಅತ್ಯಗತ್ಯ ವೈದ್ಯಕೀಯ ಪರಿಕರಗಳಲ್ಲಿ ಒಂದಾಗಿದೆ. ತೀವ್ರ ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗಳನ್ನು ವೆಂಟಿಲೇಟರ್ಗಳಲ್ಲಿ ಬಿಡುವುದು ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು, ವೆಂಟಿಲೇಟರ್ಗಳನ್ನು ಉತ್ಪಾದಿಸಲು ಸಹಾಯ ಮಾಡುವಂತೆ ಅಟೋಮೊಬೈಲ್ ಕಂಪನಿಗಳಿಗೆ ಮನವಿಯನ್ನು ಮಾಡಿಕೊಂಡಿತ್ತು. ಕೇಂದ್ರದ ಮನವಿಗೆ ಓಗೊಟ್ಟು, ಮಾರುತಿ ಸುಜುಕಿ, ಮಹೀಂದ್ರ ಮುಂತಾದ ಕಂಪನಿಗಳು ವೆಂಟಿಲೇಟರ್ ಉತ್ಪಾದನೆಯಲ್ಲಿ ತೊಡಗಿಕೊಂಡವು.
ಮಾರುತಿ ಸುಜುಕಿ ಕಂಪನಿಯು ಆರೋಗ್ಯ ಸೇವಾ ಪಾಲುದಾರರೊಂದಿಗೆ ಕೈಜೋಡಿಸಿ ವೆಂಟಿಲೇಟರ್ ಉತ್ಪಾದನೆಯಲ್ಲಿ ತೊಡಗಿದೆ. ಕೇವಲ ಇಪ್ಪತ್ತು ದಿನಗಳಲ್ಲಿ ಮಾರುತಿ ಸುಜುಕಿ ಕಂಪೆನಿಯು 1,500 ವೆಂಟಿಲೇಟರ್ಗಳನ್ನು ಉತ್ಪಾದನೆ ಮಾಡಿವೆ.
ಆದರೆ ಉತ್ಪಾದನೆಯಾದ ವೆಂಟಿಲೇಟರ್ಗಳನ್ನು ಖರೀದಿಸಲು ಆರ್ಡರ್ ಇನ್ನಷ್ಟೇ ಸರ್ಕಾರದಿಂದ ಬರಬೇಕಿದೆ. ಆರ್ಡರ್ಗಾಗಿ ಕಂಪನಿ ಕಾಯುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾರುತಿ ಸುಜುಕಿ ಮುಖ್ಯಸ್ಥ ಆರ್. ಸಿ. ಭಾರ್ಗವ ಅವರು, “ಈಗಾಗಲೇ ನಾವು ತಯಾರಿಸಿದ ವೆಂಟಿಲೇಟರ್ಗಳನ್ನು ಗುರು ಗ್ರಾಮದ ವೇದಾಂತ ಆಸ್ಪತ್ರೆಯಲ್ಲಿ ಕಳೆದ ಎರಡು ವಾರಗಳಿಂದ ಪರೀಕ್ಷೆಗೆ ಒಳಪಡಿಸಲಾಗಿದೆ. ಆಸ್ಪತ್ರೆ ಅದರ ಕಾರ್ಯಕ್ಷಮತೆಯ ಬಗ್ಗೆ ಸಂತೃಪ್ತಿಯನ್ನು ವ್ಯಕ್ತಪಡಿಸಿದೆ ಮತ್ತು ಇನ್ನಷ್ಟು ಯೂನಿಟ್ಗಳಿಗಾಗಿ ಬೇಡಿಕೆ ಇಟ್ಟಿದೆ” ಎಂದಿದ್ದಾರೆ.
“ವೆಂಟಿಲೇಟರ್ಗಳ ತೀವ್ರ ಕೊರತೆ ಹಿನ್ನೆಲೆಯಲ್ಲಿ ಸರ್ಕಾರದ ಮನವಿಗೆ ಓಗೊಟ್ಟು ನಾವು ಇದರ ಉತ್ಪಾದನೆಯನ್ನು ಮಾಡಿದ್ದೇವೆ. ಸರ್ಕಾರದ ಸಂಸ್ಥೆ ಎಚ್ಎಲ್ಎಲ್ ಲೈಫ್ ಕೇರ್ ಇದರ ಪರೀಕ್ಷೆಯನ್ನು ನಡೆಸಿದೆ. ಆದರೆ ಇನ್ನೂ ವರದಿಯನ್ನು ಕಳುಹಿಸಿಲ್ಲ. ಈ ವೆಂಟಿಲೇಟರ್ಗಳನ್ನು ಕಳುಹಿಸಿಕೊಡಲು ಇನ್ನಷ್ಟೇ ಸರ್ಕಾರದಿಂದ ನಾವು ಆರ್ಡರ್ಗಳನ್ನು ಪಡೆಯಬೇಕಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.