ತಮಿಳುನಾಡು : ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಅತ್ಯಂತ ಕುಗ್ರಾಮ ಪ್ರದೇಶದಲ್ಲಿನ ಬಡ ಗರ್ಭಿಣಿ ಮಹಿಳೆಯೊಬ್ಬರು ತೀವ್ರ ಹೆರಿಗೆ ನೋವಿನ ನಡುವೆಯೇ ಕಷ್ಟಪಟ್ಟು 7 ಕಿಲೋ ಮೀಟರ್ ದೂರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ತಲುಪಿದ್ದರು.
ಆದರೆ ವೈದ್ಯರು ಅವರನ್ನು ಪರೀಕ್ಷಿಸಿ ಕೇವಲ ಸೀಝರಿಯನ್ ಮೂಲಕ ಮಾತ್ರ ಹೆರಿಗೆ ಮಾಡಿಸಲು ಸಾಧ್ಯ, ಅದಕ್ಕೆ ಒಂದು ಯೂನಿಟ್ ರಕ್ತದ ಅವಶ್ಯಕತೆ ಇದೆ ಎಂದು ಹೇಳಿಬಿಟ್ಟರು. ಆದರೆ ಲಾಕ್ಡೌನ್ ಇರುವ ಕಾರಣದಿಂದಾಗಿ ರಕ್ತ ಲಭ್ಯವಿರಲಿಲ್ಲ.
ಗರ್ಭಿಣಿಯ ಪತಿ ರಕ್ತವನ್ನು ಸಂಗ್ರಹಿಸಲು ಹರಸಾಹಸಪಟ್ಟು ಸೋತಿದ್ದರು. ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಕ್ಕಾಗಿ ಪೊಲೀಸರು ಅವರನ್ನು ವಿಚಾರಣೆ ಕೂಡ ನಡೆಸಿದರು. ಈ ವೇಳೆ ಅವರು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು.
ಅವರ ಕಥೆಯನ್ನು ಕೇಳಿದ ಪೊಲೀಸ್ ಕಾನ್ಸ್ಟೇಬಲ್, “ನನ್ನದು ಅದೇ ಬ್ಲಡ್ ಗ್ರೂಪ್, ರಕ್ತ ನೀಡಲು ನಾನು ಸಿದ್ಧನಿದ್ದೇನೆ” ಎಂದಿದ್ದಾರೆ.
ಕಾನ್ಸ್ಟೇಬಲ್ ಅವರು ರಕ್ತ ನೀಡಿದ ಹಿನ್ನೆಲೆಯಲ್ಲಿ ಗರ್ಭಿಣಿಗೆ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.
ಕಾನ್ಸ್ಟೇಬಲ್ ಅವರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಸಬ್ಇನ್ಸ್ಪೆಕ್ಟರ್, ಅವರಿಗೆ 1000 ರೂಪಾಯಿಗಳ ನಗದು ಪ್ರೋತ್ಸಾಹ ನೀಡಿದ್ದಾರೆ.
ತಮಿಳುನಾಡಿನ ಡಿಜಿಪಿ ಅವರು ಕಾನ್ಸ್ಟೇಬಲ್ ಅವರ ಕಾರ್ಯದ ಬಗ್ಗೆ ತಿಳಿದ ಬಳಿಕ ಹತ್ತು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ನೀಡಿದ್ದಾರೆ.
ಆದರೆ 23 ವರ್ಷದ ಕಾನ್ಸ್ಟೇಬಲ್, ತಮಗೆ ಬಹುಮಾನವಾಗಿ ದೊರೆತ ಹನ್ನೊಂದು ಸಾವಿರ ರೂಪಾಯಿಗಳನ್ನು ಮಹಿಳೆ ಸುಲೋಚನ ಅವರ ಆಸ್ಪತ್ರೆ ವೆಚ್ಚವನ್ನು ಭರಿಸಲು ನೀಡಿದ್ದಾರೆ.
ಕಾನ್ಸ್ಟೇಬಲ್ ಅವರ ಅನನ್ಯ ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಟ್ಟುನಿಟ್ಟಿನ ಕಾನೂನು ಸುವ್ಯವಸ್ಥೆ ಪಾಲನೆಯೊಂದಿಗೆ, ಪೊಲೀಸರು ಮಾನವೀಯ ಕಾರ್ಯಗಳನ್ನು ಕೂಡ ಮಾಡುತ್ತಿರುವುದು ಎಲ್ಲರಿಗೂ ಮಾದರಿ. ಅವರ ಮಾನವೀಯ ಕಾರ್ಯಕ್ಕೆ ನಮ್ಮದೊಂದು ಸೆಲ್ಯೂಟ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.