ನವದೆಹಲಿ: ರಮಾನಂದ ಸಾಗರ್ ಅವರ ರಾಮಾಯಣ ಧಾರವಾಹಿ ಮತ್ತು ಬಿ ಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯನ್ನು ಮರುಪ್ರಸಾರ ಮಾಡಿದ ಬಳಿಕ ಡಿಡಿ ನ್ಯಾಷನಲ್ ತನ್ನ ಟಿಆರ್ಪಿಯನ್ನು ದೊಡ್ಡ ಮಟ್ಟದಲ್ಲಿ ಏರಿಸಿಕೊಂಡಿದೆ. ಈ ಎರಡು ಐತಿಹಾಸಿಕ ಧಾರಾವಾಹಿಗಳು ಮರುಪ್ರಸಾರ ದೊಡ್ಡ ಮಟ್ಟದಲ್ಲಿ ಜನಪ್ರಿಯಗೊಂಡ ಬಳಿಕ ಹಲವಾರು ಹಳೆಯ ಧಾರವಾಹಿಗಳು ಮರುಪ್ರಸಾರಗೊಳ್ಳಲು ಆರಂಭಗೊಂಡಿದೆ. ಇದೀಗ ಅದಕ್ಕೆ ಹೊಸ ಸೇರ್ಪಡೆ ‘ಶ್ರೀಕೃಷ್ಣ’ ಧಾರಾವಾಹಿ.
ಹೌದು ‘ಶ್ರೀಕೃಷ್ಣ’ ಧಾರಾವಾಹಿ ಮರು ಪ್ರಸಾರವಾಗಲಿದೆ ಎಂದು ದೂರದರ್ಶನ ನ್ಯಾಷನಲ್ ಮತ್ತು ಪ್ರಸಾರ ಭಾರತಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಿವೆ.
खुशखभरी हमारे दर्शकों के लिए !!
जल्द आ रहा है “श्री कृष्णा” @DDNational पर#ShriKrishna pic.twitter.com/cZ4KcONDFi— Doordarshan National (@DDNational) April 24, 2020
ರಮಾನಂದ್ ಸಾಗರ್ ನಿರ್ದೇಶನದ ಶ್ರೀಕೃಷ್ಣ ಧಾರಾವಾಹಿಯು 1993-96ರ ನಡುವೆ ಪ್ರಸಾರಗೊಂಡಿತ್ತು. 90ರ ದಶಕದ ಅತ್ಯಂತ ಜನಪ್ರಿಯ ಧಾರಾವಾಹಿ ಇದಾಗಿತ್ತು. ಅತಿ ಹೆಚ್ಚು ವೀಕ್ಷಣೆಯನ್ನು ಆ ಕಾಲದಲ್ಲಿ ಇದು ಪಡೆದುಕೊಂಡಿತ್ತು. ಮೊದಲ ಬಾರಿಗೆ ಇದು ದೂರದರ್ಶನದ ಮೆಟ್ರೋ ಚಾನೆಲ್ ಡಿಡಿ 2ನಲ್ಲಿ 1993ರಲ್ಲಿ ಪ್ರಸಾರಗೊಂಡಿತ್ತು. ಬಳಿಕ ಇದನ್ನು 1996ರಲ್ಲಿ ಡಿಡಿ ನ್ಯಾಷನಲ್ ಪ್ರಾರಂಭದಿಂದಲೇ ಮರು ಪ್ರಸಾರ ಮಾಡಿತ್ತು.
ವಿಶೇಷವೆಂದರೆ, 1999ರಲ್ಲಿ ಈ ಧಾರಾವಾಹಿಯೂ ಝಿಟಿವಿಯಲ್ಲಿ ಪ್ರಸಾರಗೊಂಡಿತ್ತು. 2001ರಲ್ಲಿ ಮತ್ತೊಮ್ಮೆ ಸೋನಿ ಮತ್ತು ಸ್ಟಾರ್ ಈ ಅತೀ ಜನಪ್ರಿಯ ಧಾರವಾಹಿಯನ್ನು ಮರುಪ್ರಸಾರ ಮಾಡಿದ್ದವು.
ಈ ಧಾರಾವಾಹಿಯಲ್ಲಿ ಸರ್ವದಾಮನ್ ಡಿ ಬ್ಯಾನರ್ಜಿಯವರು ಶ್ರೀ ಕೃಷ್ಣನ ಪಾತ್ರವನ್ನು ಮತ್ತು ವಿಷ್ಣುವಿನ ಪಾತ್ರವನ್ನು ನಿಭಾಯಿಸಿದ್ದಾರೆ, ಸ್ವಪ್ನಿಲ್ ಜೋಷಿ ಬಾಲ ಕೃಷ್ಣನ ಪಾತ್ರವನ್ನು ನಿಭಾಯಿಸಿ ಮನೆಮಾತಾಗಿದ್ದಾರೆ. ಅಶೋಕ್ ಕುಮಾರ್ ಅವರು ಯುವ ಕೃಷ್ಣನ ಪಾತ್ರ ನಿಭಾಯಿಸಿದ್ದಾರೆ, ದೀಪಕ್ ದಿಲ್ಕರವರು ಬಲರಾಮ, ಶೇಷ ಅವರು ರುಕ್ಮಿಣಿ, ಪಿಂಕಿ ಪಾರಿಕ್ ಅವರು ಯಮುನಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರೇಷ್ಮಾ ಮೋದಿ ಅವರು ರಾಧೆಯ ಪಾತ್ರವನ್ನು ನಿರ್ವಹಿಸಿದ್ದಾರೆ.
ಇದೀಗ ಮತ್ತೊಮ್ಮೆ ಐತಿಹಾಸಿಕ ಧಾರಾವಾಹಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಜನರಿಗೆ ಸಿಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.