ನವದೆಹಲಿ: ಪಂಚಾಯತ್ ರಾಜ್ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರದಾದ್ಯಂತದ ಗ್ರಾಮ ಮುಖ್ಯಸ್ಥರೊಂದಿಗೆ ಸಂವಹನ ನಡೆಸಿದರು. ಈ ವೇಳೆ ಅವರು, ” ಕೋವಿಡ್ -19 ಬಿಕ್ಕಟ್ಟು ನಮಗೆ ಸ್ವಾವಲಂಬಿಗಳಾಗಿರಲು ಕಲಿಸಿದೆ” ಎಂದು ಹೇಳಿದ್ದಾರೆ.
“ನಾವು ಸ್ವಾವಲಂಬಿಗಳಾಗಿರಬೇಕು ಎಂದು ಕೊರೊನಾವೈರಸ್ ನಮಗೆ ಕಲಿಸಿದೆ. ಏಕೆಂದರೆ ಇಲ್ಲದೇ ಇದ್ದರೆ ಅಂತಹ ದೊಡ್ಡ ಸಮಸ್ಯೆಗಳನ್ನು ಎದುರಿಸಲು ನಮಗೆ ಸಾಧ್ಯವಾಗುವುದಿಲ್ಲ” ಎಂದು ಪ್ರಧಾನಿ ಮೋದಿ ಪಂಚಾಯತಿ ರಾಜ್ ದಿವಸದ ಸಂದರ್ಭದಲ್ಲಿ ಹೇಳಿದ್ದಾರೆ.
ಗ್ರಾಮದ ಮುಖ್ಯಸ್ಥರೊಂದಿಗಿನ ಸಂವಾದದಲ್ಲಿ ಪ್ರಧಾನಿ, “ಈ ಮೊದಲು ನಾವು ಮುಖಾಮುಖಿಯಾಗಿ ಸಂವಹನ ನಡೆಸುತ್ತಿದ್ದೆವು, ಆದರೆ ನಾವು ಈಗ ಕೊರೊನಾವೈರಸ್ ಕಾರಣದಿಂದಾಗಿ ತಂತ್ರಜ್ಞಾನದ ಸಹಾಯದೊಂದಿಗೆ ಸಂವಹನ ನಡೆಸುತ್ತಿದ್ದೇವೆ’’ ಎಂದಿದ್ದಾರೆ.
“ಹಳ್ಳಿಗಳು, ಜಿಲ್ಲೆಗಳು ಮತ್ತು ನಗರಗಳು ಸ್ವಾವಲಂಬಿ ಆಗಿರಬೇಕು” ಎಂದು ಹೇಳಿದರು.
“ಕರೋನವೈರಸ್ ಸಾಂಕ್ರಾಮಿಕವು ನಾವು ಹಿಂದೆಂದೂ ಎದುರಿಸದ ಹೊಸ ಸವಾಲುಗಳನ್ನು ಎಸೆದಿದೆ, ಆದರೆ ಇದು ಹೊಸ ವಿಷಯಗಳನ್ನು ಕಲಿಯುವಂತೆ ಮಾಡಿದೆ” ಎಂದು ಹೇಳಿದರು.
ಹಳ್ಳಿಗಳಲ್ಲಿ ವಾಸಿಸುವವರಿಗೆ ಸೆಲ್ಯೂಟ್ ಮಾಡಿದ ಮೋದಿ, “ತಮ್ಮ ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಭಾರತೀಯರು ಕರೋನಾಗೆ ತಲೆಬಾಗುತ್ತಿಲ್ಲ, ಆದರೆ ಅದನ್ನು ದೃಢ ನಿಶ್ಚಯದಿಂದ ಮತ್ತು ದೃಢ ನಿರ್ಣಯದಿಂದ ಮತ್ತು ಸಾಂಪ್ರದಾಯಿಕ ಜ್ಞಾನದಿಂದ ಎದುರಿಸುತ್ತಿದ್ದಾರೆ ” ಎಂದು ಹೇಳಿದರು.
ಪಂಚಾಯತಿ ರಾಜ್ ದಿವಸ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇ-ಗ್ರಾಮಸ್ವರಾಜ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಉದ್ಘಾಟಿಸಿದರು. ಪ್ರಧಾನಿ ಮತ್ತು ಗ್ರಾಮದ ಮುಖ್ಯಸ್ಥರ ನಡುವಿನ ಸಂವಾದದ ಸಂದರ್ಭದಲ್ಲಿ ಪಂಚಾಯತಿ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್ ಉಪಸ್ಥಿತರಿದ್ದರು.
ಸ್ವಾಮಿತ್ವ ಆ್ಯಪ್ನ ಅನುಕೂಲಗಳನ್ನು ವಿವರಿಸಿದ ಪ್ರಧಾನಿ, ಇದು ಗ್ರಾಮದ ಜನರಿಗೆ ತುಂಬಾ ಉಪಯುಕ್ತವಾಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಏಪ್ರಿಲ್ 24 ರಂದು ಆಚರಿಸಲಾಗುತ್ತದೆ.
ಮೋದಿ ಅವರು ಪ್ರಾರಂಭಿಸಿದ ಪೋರ್ಟಲ್ ಪಂಚಾಯತ್ ರಾಜ್ ಸಚಿವಾಲಯದ ಹೊಸ ಉಪಕ್ರಮವಾಗಿದ್ದು, ಗ್ರಾಮ ಪಂಚಾಯಿತಿಗಳಿಗೆ ತಮ್ಮ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (ಜಿಪಿಡಿಪಿ) ಯನ್ನು ತಯಾರಿಸಲು ಮತ್ತು ಕಾರ್ಯಗತಗೊಳಿಸಲು ಒಂದೇ ಇಂಟರ್ಫೇಸ್ ಅನ್ನು ಒದಗಿಸುತ್ತದೆ.
ಈ ಯೋಜನೆಯು ಗ್ರಾಮೀಣ ಭಾರತಕ್ಕೆ ಸಮಗ್ರ ಆಸ್ತಿ ಮೌಲ್ಯಮಾಪನ ಪರಿಹಾರವನ್ನು ಒದಗಿಸುತ್ತದೆ.
Interacting with Sarpanchs across the country through Video-Conferencing on Panchayati Raj Divas. https://t.co/irKVx4lKN6
— Narendra Modi (@narendramodi) April 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.